ಸಿದ್ದಾಪುರ; ಬೈಕ್‌ ಸವಾರನ ಮೇಲೆ ಕಾಡಾನೆ‌ ದಾಳಿಗೆ ಯತ್ನ: ಪ್ರಾಣಾಪಾಯದಿಂದ ಪಾರು

Feb 9, 2026 - 07:15
 0  2.6k
ಸಿದ್ದಾಪುರ; ಬೈಕ್‌ ಸವಾರನ ಮೇಲೆ ಕಾಡಾನೆ‌ ದಾಳಿಗೆ ಯತ್ನ: ಪ್ರಾಣಾಪಾಯದಿಂದ ಪಾರು

ಸಿದ್ದಾಪುರ: ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಕರಡಿಗೋಡಿನಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.

 ಕರಡಿಗೋಡು ಇವಾಲ್ವ್ ಬ್ಯಾಕ್ (ಓರೆಂಜ್ ಕೌಂಟಿ) ರೆಸಾರ್ಟ್ ಉದ್ಯೋಗಿ ಪುಟ್ಟುಸ್ವಾಮಿ ಬೈಕಿನಲ್ಲಿ ಮನೆಯಿಂದ ರೆಸಾರ್ಟ್ ಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆಯೊಂದು ದಾಳಿಗೆ ಯತ್ನಿಸಿದೆ. ಕೂದಲೆಳೆ ಅಂತರದಲ್ಲಿ ಪಾರಾದ ಸವಾರ ಬೈಕನ್ನು ಬಿಟ್ಟು ಓಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಅಪಾರ ಪ್ರಮಾಣದ ಕಾಫಿ ಫಸಲುಗಳನ್ನು ನಾಶಪಡಿಸಿದೆ. ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 3
Wow Wow 1