ಕರಡಿಗೋಡು: ಕಾವೇರಿ ನದಿ‌ ದಡದಲ್ಲಿ ರಾಶಿ ರಾಶಿ ತ್ಯಾಜ್ಯ !

Jun 5, 2025 - 22:30
Jun 5, 2025 - 22:32
 0  39
ಕರಡಿಗೋಡು: ಕಾವೇರಿ ನದಿ‌ ದಡದಲ್ಲಿ  ರಾಶಿ ರಾಶಿ ತ್ಯಾಜ್ಯ !

ಸಿದ್ದಾಪುರ:- ಕಾವೇರಿ ನದಿ ದಡದಲ್ಲಿ ಕಿಡಿಗೇಡಿಗಳು ಸಮಾರಂಭವೊಂದರ ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿದಿದ್ದು ಈ ಬಗೆ ಗ್ರಾಮ ಪಂಚಾಯಿತಿ ಕೂಡಲೇ ತಪ್ಪಿತಸ್ಥ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನದಿ ದಡದಲ್ಲಿಯೇ ಪ್ಲಾಸ್ಟಿಕ್ ಚೀಲಗಳಲ್ಲಿ ಊಟದ ತಟ್ಟೆ ಬೀಯರ್ ಬಾಟಲ್ಗಳು ಸೇರಿದಂತೆ ತ್ಯಾಜ್ಯಗಳನ್ನು ತಂದು ಸುರಿದಿದ್ದು ನೊಣಗಳು ಹರಿದಾಡಿ ದುರ್ನಾತ ಬೀರುತ್ತಿದೆ.ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಕರಡಿಗೋಡು ಗ್ರಾಮದ ಮುಖ್ಯ ರಸ್ತೆಯ ಸನಿಹವೆ ಕಾವೇರಿ ನದಿ ದಡದ 10ಮೀಟರ್ ದೂರದಲ್ಲಿ ಈ ತ್ಯಾಜ್ಯ ವಿಲೇವಾರಿ ಮಾಡಲಾಗಿದ್ದು ಪ್ರವಾಹದಲ್ಲಿ ನದಿ ನೀರಿಗೆ ಸೇರಿ ಜಲಮಾಲಿನ್ಯ ಉಂಟಾಗಲಿದ್ದು ಜಲಚರಗಳು,ಜನಸಾಮಾನ್ಯರಿಗೂ ಮಾರಕವಾಗಲಿದ್ದು ಕೂಡಲೇ ಗ್ರಾಮ ಪಂಚಾಯಿತಿ ತ್ಯಾಜ್ಯ ತೆರವಿಗೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಸುರೇಶ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಕೂಕ್ಕುನೂರು ರಂಜು,ರಾಜ ದಿನೇಶ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0