ಚರಮಂಡ ಕುಟುಂಬಸ್ಥರಿಂದ ಎ.ಎಸ್ ಪೊನ್ನಣ್ಣರವರಿಗೆ ಸನ್ಮಾನ

ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ, ಮಡಿಕೇರಿ ತಾಲೂಕು ಕುಂಜಿಲಗೇರಿ ಗ್ರಾಮದ ಚರಮಂಡ ಕುಟುಂಬಸ್ಥರು, ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಕೃತಜ್ಞತಾ ಪೂರ್ವಕವಾಗಿ ಸನ್ಮಾನಿಸಿದರು.ಈ ಹಿಂದೆ ಚರಮಂಡ ಕುಟುಂಬಸ್ಥರು, ತಮ್ಮ ಮುಂದು ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಶಾಸಕರ ಗಮನಕ್ಕೆ ತಂದಿದ್ದರು. ಇದರ ತುರ್ತು ಅವಶ್ಯಕತೆಯನ್ನು ಮನಗಂಡ ಮನೆ ಶಾಸಕರು ತಮ್ಮ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಿದರು. ಶಾಸಕರ ಈ ವಿಶಾಲ ಮನೋಭಾವದಿಂದಾಗಿ ಇಂದು ಕುಟುಂಬದ ಎಲ್ಲಾ ಸದಸ್ಯರು ಶಾಸಕರನ್ನು ಕೃತಜ್ಞಾರ್ಥವಾಗಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರು, ಮುಂದಿನ ದಿನಗಳಲ್ಲಿ, ಚರಮಂಡ ಕುಟುಂಬಸ್ಥರ ಮಂದ್ ಮನೆ ಅಭಿವೃದ್ಧಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಚರಮಂಡ ಕುಟುಂಬಸ್ಥರೊಂದಿಗೆ ಕುಂಜಲಗೇರಿ ಗ್ರಾಮದ ಬಟ್ಟಕಾಳಂಡ ದಿನೇಶ್ ರಾಜ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
What's Your Reaction?






