ಚೆಟ್ಟಳ್ಳಿ: ಕೃಷಿಕರ ಗಮನ ಸೆಳೆದ ಬಟರ್ ಫ್ರೂಟ್ ಹಣ್ಣಿನ ವೈವಿಧ್ಯತೆಯ ಮೇಳ: ಬೆಣ್ಣೆಹಣ್ಣಿನ ಬೇಸಾಯವನ್ನು ಅಭಿವೃದ್ಧಿಪಡಿಸಲು ತಜ್ಞರ ಸಲಹೆ

Jun 23, 2025 - 11:55
Jun 23, 2025 - 12:02
 0  70
ಚೆಟ್ಟಳ್ಳಿ: ಕೃಷಿಕರ ಗಮನ ಸೆಳೆದ ಬಟರ್ ಫ್ರೂಟ್ ಹಣ್ಣಿನ ವೈವಿಧ್ಯತೆಯ ಮೇಳ:  ಬೆಣ್ಣೆಹಣ್ಣಿನ ಬೇಸಾಯವನ್ನು ಅಭಿವೃದ್ಧಿಪಡಿಸಲು ತಜ್ಞರ ಸಲಹೆ

ಚೆಟ್ಟಳ್ಳಿ: ರೈತರು ಬೆಳೆದ ವಿವಿಧ ಬಗೆಯ ಬೆಣ್ಣೆಹಣ್ಣುಗಳು ಹಾಗು ವಿವಿಧ ರೀತಿಯ ಖಾದ್ಯಗಳ ಪ್ರದರ್ಶನವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಯೋಜಿಸಿದ ಬೆಣ್ಣೆ ಹಣ್ಣಿನ(ಬಟರ್ ಫ್ರೂಟ್) ವೈವಿಧ್ಯತೆಯ ಮೇಳ, ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯಲ್ಲಿ ಕ್ರಷಿಕರ ಗಮನ ಸೆಳೆದವು.

ವಿದೇಶಿ ಹಣ್ಣಿನ ತಳಿಗಳಾದ ಫೀರೈಟೆ,ಪಿಂಕ್ ಕರ್ಟನ್, ಕ್ಯಾರ್ಮೆನ್ ಹ್ಯಾಸ್,ಡಿಗಾನಿಯಾ, ದೇಶೀಯ 78 ವಿಧದ ಹಣ್ಣುಗಳು ಹಾಗು ಕೇಂದ್ರದ ಸಂಶೋದಿತ ತಳಿಗಳಾದ ಅರ್ಕಾ ಸುಪ್ರೀಮ್,ಅರ್ಕಾ ಕೂರ್ಗ್ ರವಿ ಹಾಗು ಟಿಕೆಡಿ ಪ್ರದರ್ಶನಗೊಂಡರೆ ಮಹಿಳೆಯರು ತಯಾರಿಸಿದ ಬೆಣ್ಣೆ ಹಣ್ಣಿನ ಸೂಫ್ಲೆ, ಕೇಕ್, ಇಡ್ಲಿ,ಕಾಫಿ, ಸ್ಯಾಂಡ್ವಿಚ್, ಚಟ್ನಿ, ಬ್ರೆಡ್ ಸ್ಪೆಡ್,ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳು ಪ್ರದರ್ಶನಗೊಂಡವು.

ಪೊನ್ನಂಪೇಟೆಯ ಸಿಇಟಿ ಕಾಲೇಜಿನ ನಿರ್ದೇಶಕರು ಹಾಗು ಪ್ರಗತಿಪರ ಬೆಳೆಗಾರರಾದ ಕುಪ್ಪಂಡ ಎ.ಚಿಣ್ಣಪ್ಪ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿ ಕೊಡಗಿನವರು ಕಾಫಿ ಹಾಗು ಕರಿಮೆಣಸು ಬೆಳೆಯನ್ನು ಆದಾಯದ ಮೂಲವಾಗಿ ರೂಪಿಸಿ ಕೊಂಡಿದ್ದರೂ ಆದರೆ ಕೊಡಗಿನ ಕಿತ್ತಳೆಗೆ ಹೆಚ್ಚಿನ ಒತ್ತುನೀಡಿ ದಿದ್ದರೆ ಕಿತ್ತಳೆಬೆಳೆಯನ್ನು ಅಭಿವ್ರದ್ದಿಪಡಿಸ ಬಹುದಿತೆಂದರು.ಇಂತಹ ವೈವಿದ್ಯತಾ ಮೇಳಗಳು ಕ್ರಷಿಕರಿಗೆ ಪ್ರಯೋಜನ ಕಾರಿಯಾಗಲಿದೆಂದರು.

ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆಯ ಮಾಜೀ ನಿರ್ದೇಶಕರಾದ ದಿನೇಶ್ ಎಂ.ಆರ್. ಮಾತನಾಡಿ ಕೊಡಗಿನಲ್ಲಿ ಹಲವು ವರ್ಷಗಳಿಂದಲೇ ಈ ಬೆಣ್ಣೆಹಣ್ಣನ್ನು ಬೆಳೆಸಲಾಗುತಿದೆ.ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಕಂಡುಕೊಳ್ಳ ಬೇಕೆಂದರು. ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಬೆಣ್ಣೆಹಣ್ಣಿನ ಸಂಶೋದಿತ ತಳಿಗಳನ್ನು ಅಭಿವ್ರದ್ದಿ‌ ಪಡಿಸ ಲಾಗುತಿದೆಂದರು. ನಿರ್ದೇಶಕರಾದ‌ ಡಾ.ಪ್ರಕಾಶ್ ಪಾಟೀಲ್ ಮಾತನಾಡಿ ಆದಾಯದ ಮೂಲವಾಗಿ ಒಂದೇ ಬೆಳೆಯನ್ನು ಅವಲಂಬಿಸುವ ಬದಲು ವಿವಿಧ ಬೆಳೆಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯದ ಮೂಲಗಳನ್ನು ಕಂಡುಕೊಳ್ಳ ಬೇಕೆಂದರು. ಕೊಡಗಿನ ವಾತಾವರಣವೂ ಬೆಣ್ಣೆಹಣ್ಣಿನ ಬೇಸಾಯಕ್ಕೆ ಉತ್ತಮವಾಗಿದೆಂದರು.ಮೊದಲಿಗೆ ಐಹೆಚ್ ಅರ್ ಗೀತೆಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆ ಹಣ್ಣು ವಿಭಾಗದ‌ ಮುಖ್ಯಸ್ಥರಾದ ಡಾ.ಎಂ ಶಂಕರ್ ಸ್ವಾಗತಿ, ಕೇಂದ್ರದ ಮುಖ್ಯಸ್ಥ ರಾದ ಡಾ ಮುರುಳಿದರ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಣ್ಣೆ ಹಣ್ಣಿನ‌ಬೇಸಾಯ ಕ್ರಮದ ಬಗ್ಗೆಗಿನ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಸನ್ಮಾನ: ಡಾ.ದಿನೇಶ್ ಎಂ.ಆರ್ ಹಾಗು ಕೆ.ಎ.ಚಿಣ್ಣಪ್ಪರವರಿಗೆ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವಿಜೇತರಿಗೆ ಬಹುಮಾನ: ಬೆಣ್ಣೆಹಣ್ಣಿ ವಿವಿಧ ತಳಿಗಳ ಪ್ರದರ್ಶನದಲ್ಲಿ ವೈನಾಡಿನ ಜೋಸೆಫ್ ಕುರುವಿಳಾ ಪ್ರಥಮ,ಅಭ್ಯತಂಮಗಲದ ಕೆ.ಸಿ.ಉಮೇಶ್ ದ್ವಿತೀಯ, ಮಾದಾಪುರದ ಅನಿಲ್ ಚಂಗಪ್ಪ ತ್ರತೀಯ ಬಹುಮಾನ‌ ಪಡೆದರು. ಬೆಣ್ಣೆಹಣ್ಣಿನ ವಿವಿಧ ಖಾದ್ಯಗಳ ವಿಭಾಗದಲ್ಲಿ ಸೋಮವಾರ ಪೇಟೆಯ ಸಂದ್ಯಾರಾಣಿ ಪ್ರಥಮ,‌ ಮಡಿಕೇರಿಯ ಅಕ್ಷತಾ ಮುರುಳಿಧರ್ ದ್ವಿತೀಯ, ಚೆಟ್ಟಳ್ಳಿಯ ಪುತ್ತರಿರ ಕನ್ನು ಕಾಳಯ್ಯ ತ್ರತೀಯ ಬಹುಮಾನ ಪಡೆದಿದ್ದಾರೆ.

ತಾಂತ್ರಿಕ ವಿಷಯ ಮಂಡನೆ: 

ಬೆಣ್ಣೆಹಣ್ಣು ಕೊಯ್ಲಿನ ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಬಗ್ಗೆ ಡಾ.ಪ್ರೀತಿ.ಪಿ. ಹಿರಿಯ ವಿಜ್ಞಾನಿಗಳು,ಐಸಿಎಅರ್,ಐಐ ಹೆಚ್ ಅರ್ ಬೆಂಗಳೂರು ಹಾಗು ಬೆಣ್ಣೆ ಹಣ್ಣು ಕೃಷಿಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳು ಡಾ. ಮುರಳೀಧರ ಬಿ.ಎಂ., ಹಿರಿಯ ವಿಜ್ಞಾನಿ (ಹಣ್ಣು ವಿಜ್ಞಾನ), ಐಸಿಎಆರ್-ಐ ಐಎಚ್ ಆರ್. ಚೆಟ್ಟಳ್ಳಿಇವರು ಮಾಹಿತಿ ನೀಡಿದರು.ನಂತರ ರೈತ -ವಿಜ್ಞಾನಿಗಳ ಸಂವಾದ, ಕ್ಷೇತ್ರ ಬೇಟಿ‌ಕಾರ್ಯಕ್ರಮ ನಡೆಯಿತು.

ಅರ್ಕಾ ಸುಪ್ರೀಮ್ ಹಾಗು ಅರ್ಕಾ ಕೂರ್ಗ್ ರವಿ ತಳಿಗಳ ಅಭಿವ್ರದ್ದಿಗೆ ಕೇಂದ್ರದಿಂದ ಗೋಣಿಕೊಪ್ಪಲಿನ ರಶ್ಮಿರವರಿಗೆ ಲೈಸನ್ಸ್ ನೀಡಲಾಯಿತು. ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷರು ಹಾಗು ಪ್ರಗತಿ ಪರ ರೈತರಾದ ನಡಿಕೇರಿಯಂಡ ಬೋಸ್ ಮಂದಣ್ಣ‌, ವಿವಿಧ ಇಲಾಖಾ ಆದಿಕಾರಿಗಳು, ಸೇರಿದಂತೆ ಕ್ರಷಿ ವಿಜ್ಞಾನ ‌ಕೇಂದ್ರ ಗೋಣಿಕೊಪ್ಪಲು, ಕಾಫಿ ಸಂಶೋಧನಾ‌‌ ಕೇಂದ್ರ ಚೆಟ್ಟಳ್ಳಿ, ಜೆಎಸ್ ಎಸ್ ಕ್ರಷಿ ವಿಜ್ಞಾನ ‌ಕೇಂದ್ರ‌ಮೈಸೂರು,ಸಂಬಾರ ಮಂಡಳಿ ಅಪ್ಪಂಗಳದ ಅಧಿಕಾರಿಗಳು ಭಾಗವಹಿಸಿದರು.

ವರದಿ : ಪುತ್ತರಿರ ಕರುಣ್ ಕಾಳಯ್ಯ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0