ಪಂಚಾಯತ್ ರಾಜ್ ಇಲಾಖೆ ಕಾರ್ಯವೈಖರಿ ಬಗ್ಗೆ ಪೊನ್ನಣ್ಣ ತೀವ್ರ ಅಸಮಾಧಾನ

ಮಡಿಕೇರಿ:ಪಂಚಾಯತ್ ರಾಜ್ ಇಲಾಖೆಯ ನಿಧಾನಗತಿ ದೋರಣೆ ಬಗ್ಗೆ ಎ.ಎಸ್.ಪೊನ್ನಣ್ಣ ನವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಬೇಂಗೂರು ಸಮೀಪ ದೋಣಿ ಕಾಡು ಎಂಬಲ್ಲಿ 40 ಕುಟುಂಬಗಳು ಕಾವೇರಿ ಪ್ರವಾಹದಿಂದ ಸಂಕಷ್ಟ ಕ್ಕೆ ಪ್ರತಿವರ್ಷ ಒಳಗಾಗುತ್ತಿದ್ದು ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಕಳುಹಿಸಲು ಸೂಚಿಸಿದ್ದರೂ ವಿಳಂಬ ಮಾಡಿದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಅರಣ್ಯ ಇಲಾಖೆಯವರು ಸಣ್ಣಪುಟ್ಟ ನಿಯಮಗಳ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.ಅಪಾಯಕಾರಿ ಮರಗಳು ಅಥವಾ ಮರದ ಕೊಂಬೆಗಳನ್ನು ಕತ್ತರಿಸಲು ತಕ್ಷಣವೇ ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.
What's Your Reaction?






