ಪಿ ಡಬ್ಲ್ಯೂಡಿ ಅಧಿಕಾರಿಗಳ ಮೇಲೆ ಎ.ಎಸ್.ಪೊನ್ನಣ್ಣ ಗರಂ

Jun 20, 2025 - 14:27
 0  108
ಪಿ ಡಬ್ಲ್ಯೂಡಿ ಅಧಿಕಾರಿಗಳ ಮೇಲೆ ಎ.ಎಸ್.ಪೊನ್ನಣ್ಣ ಗರಂ

ಮಡಿಕೇರಿ:ಸರಿಯಾದ ಅಂಕಿ ಅಂಶಗಳ ವಿವರಣೆ ನೀಡದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳ ಬಗ್ಗೆ ಎ.ಎಸ್.ಪೊನ್ನಣ್ಣ ನವರು ಗರಂ ಆದ ಘಟನೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕಂಡು ಬಂದಿತು.ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕಿನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ ಎಷ್ಟು ರಸ್ತೆಗಳಿಗೆ ಯಾವ ಮಟ್ಟಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿ ಎಂದು ಪೊನ್ನಣ್ಣ ನವರು ಲೋಕೋಪಯೋಗಿ ಇಂಜಿನಿಯರ್ ಗಳನ್ನು ಕೇಳಿದಾಗ ಇಂಜಿನಿಯರ್ ಗಳು ತಬ್ಬಿಬ್ಬಾದರು.ಇದರಿಂದ ಕುಪಿತರಾದ ಪೊನ್ನಣ್ಣ ವರು ಅನುದಾನ ಕೇಳುವುದು ಮತ್ತು ಗುತ್ತಿಗೆದಾರರಿಗೆ ಕಾಮಗಾರಿ ನೀಡುವುದು ಮಾತ್ರ ನಿಮ್ಮ ಕೆಲಸವೇ ಎಂದು ಪ್ರಶ್ನಿಸಿದರು. ನೀವು ವೀಕ್ಷಣೆ ಮಾಡಿ ಪಟ್ಟಿ ಮಾಡುವ ಕೆಲಸ ಮಾಡಬಾರದೇ ಎಂದು  ತೀಕ್ಷ್ಣ ವಾಗಿ ಕೇಳಿದರು.ಕೂಡಲೇ ಸ್ಥಳ ಪರಿಶೀಲಿಸಿ ವಿವರಣೆ ನೀಡಲು ಸೂಚನೆ ನೀಡಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0