ಬೆಂಗಳೂರು ಕೊಡವ ಸಮಾಜಕ್ಕೆ ಜಾಗ ಮಂಜೂರು: ಸಮಾಜ ಬಾಂಧವರಿಂದ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ವಿರಾಜಪೇಟೆಯಲ್ಲಿ ಅದ್ಧೂರಿ ಸ್ವಾಗತ:

Jun 21, 2025 - 00:28
 0  39
ಬೆಂಗಳೂರು ಕೊಡವ ಸಮಾಜಕ್ಕೆ ಜಾಗ ಮಂಜೂರು: ಸಮಾಜ ಬಾಂಧವರಿಂದ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ವಿರಾಜಪೇಟೆಯಲ್ಲಿ ಅದ್ಧೂರಿ  ಸ್ವಾಗತ:

ವಿರಾಜಪೇಟೆ:ಅನೇಕ ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಬೆಂಗಳೂರು ಕೊಡವ ಸಮಾಜದ ಜಾಗದ ಸಮಸ್ಯೆ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಭಾಗದ ಕೊಡವ ಸಮಾಜ ಬಾಂದಧವರು ಮತ್ತು ಪಕ್ಷದ ಕಾರ್ಯಕರ್ತರು ಇಂದು ಸಂಭ್ರಮಾಚರಣೆ ಮಾಡಿದರು.

ಬೆಂಗಳೂರು ಕೊಡವ ಸಮಾಜಕ್ಕೆ ಸ್ಥಳ ಮಂಜೂರಾಗಿ ದಶಕಗಳೇ ಕಳೆದರು ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಸಮಸ್ಯೆಯ ಗಂಭೀರತೆಯನ್ನು ಅರಿತ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ . ಪೊನ್ನಣ್ಣ ಅವರ ಸ್ವ ಪ್ರಯತ್ನದಿಂದ ಸುಮಾರು ೭ ಎಕ್ರೆ ಸ್ಥಳ ಸರ್ಕಾರಿ ನಿಗದಿ ಬೆಲೆ 1,70,10,000 ರೂ ರಲ್ಲಿ ಮರು ಕೊಡವ ಸಮಾಜದ ಸುಪರ್ದಿಗೆ ನೊಂದಣಿ ಮಾಡಲಾದ ಹಿನ್ನೆಲೆಯಲ್ಲಿ ವಿರಾಜಪೇಟೆ ಕೊಡವ ಸಮುದಾಯದ ಬಾಂಧವರಿಂದ ಸಿಡಿಮದ್ದು ಸಿಡಿಸಿ ಶಾಸಕರಿಗೆ ಸಂಭ್ರಮದ ನಮನಗಳನ್ನು ಸಲ್ಲಿಸಿದರು

ಶಾಸಕರನ್ನು ಶಾಸಕರ ಮನೆಯ ಆವರಣದಲ್ಲಿ ಬರಮಾಡಿಕೊಂಡ ಕಾರ್ಯಕರ್ತರು ಮತ್ತು ಜನಾಂಗ ಬಾಂಧ ವರುಶಾಸಕರಿಗೆ ಕೊಡವ ಪದ್ಧತಿಯಂತೆ ಪೇಟ,ಕೊಡವ ಶಲ್ಯ,ತುರಾಯಿ ತೊಡಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಶಾಸಕರು, ಸಮಸ್ಯೆಯು ದಶಕಗಳಿಂದ ನಡೆದು ಬಂದಿದೆ. ಅದರೇ ತಾತ್ವಿಕ ಅಂತ್ಯವಾಗಲಿಲ್ಲ.ಸಮಸ್ಯೆ ಅರಿತು ಇತ್ಯರ್ಥ ಮಾಡಲು ಸರ್ಕಾರದ ಮನವೊಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಭಾಷೆ,ಸಂಸ್ಕೃತಿ,ಅಚಾರ ವಿಚಾರಗಳು ಎಂದಿಗೂ ಎಂದೆಂದಿಗೂ ನೆಲೆನಿಲ್ಲಬೇಕು.ಪೂರ್ವಜರು ಕಂಡಿರುವ ಧೀಮಂತ ಸಂಸ್ಕೃತಿಗಳು ಮುಂದಿನ ಪೀಳಿಗೆಗಳು ನೆನೆಪಿಸಿಕೊಳ್ಳಬೇಕು. ಸರ್ವ ಜನ ಸುಖಿನೊ ಭವಂತು ಎನ್ನುವ ಮನೋಧರ್ಮ ಭಾವನೆಯ ಹಿನ್ನೆಲೆಯಲ್ಲಿ

ಎಲ್ಲಾ ಧರ್ಮ ಮತ್ತು ಜಾತಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಸರ್ಕಾರದ ಮಟ್ಟದ ದೊರಕುವ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬಯಕೆ ನನ್ನದು. ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಸಂಧರ್ಭದಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಗೋಣಿಕೊಪ್ಪ ವಲಯ ಕಾಂಗ್ರೆಸ್ ಅದ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ,ಪಕ್ಷ ಪ್ರಮುಖರಾದ ಮುಕಳೇರ ಕುಶಾಲಪ್ಪ,ಬಿದ್ದಾಟಂಡ ತಮ್ಮಯ್ಯ, ಪೋರೇರ ಬಿದ್ದಪ್ಪ, ಎಂ.ಎಸ್. ಪೂವಯ್ಯ, ಚಿಲ್ಲವಂಡ ಕಾವೇರಪ್ಪ, ಪುರಸಭೆಯ ಅದ್ಯಕ್ಷರಾದ ದೇಚಮ್ಮ ಕಾಳಪ್ಪ, ಜಿಲ್ಲಾ ಮತ್ತು ತಾಲೂಕು ಘಟಕದ ಯುವ ಕಾಂಗ್ರೆಸ್ ಮುಖಂಡರಾದ ಜಮ್ಮಡ ಸೋಮಣ್ಣ, ರಕ್ಷಿತ್ ಚೆಂಗಪ್ಪ, ಶೃಂಗಾ, ಕುಂದಚೀರ ಮಂಜು ,ದ್ಯಾನ್ ದೇವಯ್ಯ, ಕಲಿಯಂಡ ಸಂಪನ್ ಅಯ್ಯಪ್ಪ ,ಕೊಡವ ಸಮಾಜ ಬಾಂಧವರು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0