ಮಳೆಯಿಂದಾಗಿ ಮನೆಗೆ ಹಾನಿ:ಪತ್ರಕರ್ತ ಜಯಪ್ರಕಾಶ್ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ

Jun 17, 2025 - 22:38
Jun 17, 2025 - 22:42
 0  101
ಮಳೆಯಿಂದಾಗಿ ಮನೆಗೆ ಹಾನಿ:ಪತ್ರಕರ್ತ ಜಯಪ್ರಕಾಶ್ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ

ಕುಶಾಲನಗರ: ಮಳೆಯಿಂದಾಗಿ ಹಾನಿಯಾದ, ಪತ್ರಕರ್ತ ಜಯಪ್ರಕಾಶ್ ಅವರ ಮನೆಗೆ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದಿಂದ ನೀಡಲಾಗುವ ಪರಿಹಾರದ ಹಣವನ್ನು ತ್ವರಿತಗತಿಯಲ್ಲಿ ಒದಗಿಸಿಕೊಡುವಂತೆ ತಾಲ್ಲೂಕು ತಹಶಿಲ್ದಾರರಿಗೆ ಸೂಚನೆ ನೀಡಿದರು. ನಂತರ ಮಾನಸಿಕ ಧೈರ್ಯ ನೀಡಿದ ಶಾಸಕರು, ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡುವುದರ ಜೊತೆಗೆ ಪಕ್ಷದ ಮುಖಂಡರಿಗೂ ಪತ್ರಕರ್ತ ಜಯಪ್ರಕಾಶ್ ಅವರಿಗೆ ಸಹಾಯ ಮಾಡುವಂತೆ ತಿಳಿಸಿದರು. ಶಾಸಕರ ಸೂಚನೆಯಂತೆ ಮನೆಯು ವಾಸಿಸಲು ಯೋಗ್ಯವಿಲ್ಲದ ಪೂರ್ಣಪ್ರಮಾಣದ (2.70 ಲಕ್ಷ) ಪರಿಹಾರದ ಹಣ ಒದಗಿಸಿಕೊಡುವುದಾಗಿ ತಹಶಿಲ್ದಾರ್ ಕಿರಣ್ ಗೌರಯ್ಯ ತಿಳಿಸಿದರು. 

ಈ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್,ಪತ್ರಕರ್ತ ಸಂಘ ರಾಷ್ಟ್ರೀಯ ಸಮಿತಿ ಸದಸ್ಯರಾದ ಸುನಿಲ್ ಪೊನ್ನಟ್ಟಿ, ಜಿಲ್ಲಾ ಸಂಘದ ನಿರ್ದೇಶಕರಾದ ರಘು ಹೆಬ್ಬಾಲೆ, ಟಿ.ಆರ್.ಪ್ರಭುದೇವ್, ಕೆ.ಬಿ.ಶಂಶುದ್ಧೀನ್, ಕುಶಾಲನಗರ ತಾಲ್ಲೂಕು ಸಂಘದ ನಿರ್ದೇಶಕರಾದ ಮುಸ್ತಫ, ಶಿವರಾಜು, ವಿನೋದ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0