ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ವಕ್ಫ್ ಸಂರಕ್ಷಣಾ ಪ್ರತಿಭಟನೆ ಯಶಸ್ಸುಗೊಳಿಸಲು ಆರ್.ಕೆ ಅಬ್ದುಲ್ ಸಲಾಂ ಕರೆ
ಮಡಿಕೇರಿ:ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಏಪ್ರಿಲ್ 22 ಮಂಗಳವಾರ ಬೆಳಗ್ಗೆ 11ಗಂಟೆಗೆ ಹಮ್ಮಿಕೊಂಡಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ವಕ್ಫ್ ಸಂರಕ್ಷಣಾ ಪ್ರತಿಭಟನೆಗೆ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ನೀಡಲಿದ್ದು,ಪ್ರತಿಭಟನೆಯನ್ನು ಯಶಸ್ಸುಗೊಳಿಸಲು ವಿರಾಜಪೇಟೆ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಯ ಕಾಂಗ್ರೆಸ್ ವಲಯಾಧ್ಯಕ್ಷರುಗಳು ಬೂತ್ ಕಮಿಟಿ,ವಲಯ ಕಮಿಟಿ, ಚುನಾಯಿತ ಪ್ರತಿನಿಧಿಗಳು ಮುಂಚೂಣಿ ಘಟಕದ ಸೆಲ್ ಗಳ ಅಧ್ಯಕ್ಷರುಗಳು,ಕೆಪಿಸಿಸಿ ಕಾರ್ಯದರ್ಶಿಗಳು ಡಿಸಿಸಿ ಸದಸ್ಯರುಗಳು ಹಾಗೂ ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರುಗಳು,ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ಸುಗೊಳಿಸಿ,
ಮಡಿಕೇರಿಯಲ್ಲಿ ಐತಿಹಾಸಿಕ ಇತಿಹಾಸವನ್ನು ಸೃಷ್ಟಿಸಲು ಎಲ್ಲಾ ಸಮಾನ ಮನಸ್ಕರು ಕೈ ಜೋಡಿಸಬೇಕಾಗಿ ಆರ್.ಕೆ ಅಬ್ದುಲ್ ಸಲಾಂ ಮನವಿ ಮಾಡಿದ್ದಾರೆ.
What's Your Reaction?






