ಜಮ್ಮಾಬಾಣೆ ವಿಧೇಯಕ ತಿದ್ದುಪಡಿ ಅಂಗೀಕಾರ : ಶಾಸಕ ಡಾ.ಮಂತರ್ ಗೌಡ ಅವರಿಗೆ ಧನ್ಯವಾದ ಅರ್ಪಿಸಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಎ ಅಬ್ದುಲ್ ರಜಾಕ್
ಸೋಮವಾರಪೇಟೆ:ಕೊಡಗಿನ ಜಮ್ಮಾ ಬಾಣೆ ಕುರಿತಾಗಿ ಹಲವಾರು ವರ್ಷಗಳಿಂದ ಇದ್ದ ಜಟಿಲ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಸದನದಲ್ಲಿ ಒತ್ತಡ ಹೇರಿ, ವಿಧೇಯಕದಲ್ಲಿ ಇದ್ದ ಲೋಪದೋಷಗಳನ್ನು ಎತ್ತಿ ಹಿಡಿದು ಬದಲಾವಣೆಗೆ ಪಟ್ಟು ಹಿಡಿದು ಸದನದ ಪರಿಶೀಲನಾ ಸಮಿತಿಯಲ್ಲಿ ಗಟ್ಟಿ ಧ್ವನಿ ಮೊಳಗಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜಮ್ಮಾ ಬಾಣೆ ತಿದ್ದುಪಡಿ ವಿಧೇಯಕದ ಸದನದಲ್ಲಿ ಅಂಗೀಕಾರವಾಗುವಲ್ಲಿ ಪ್ರಮುಖ ಪಾತ್ರ ವಹಿಸಿ ಕೊಡಗು ಜಿಲ್ಲೆಯ ಜನತೆಯ ಜನತೆಯ ಪರವಾಗಿ ಧ್ವನಿ ಎತ್ತಿದ ಮಾನ್ಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರಿಗೆ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಅಬ್ದುಲ್ ರಜಾಕ್ ಕೆ ಎ ಧನ್ಯವಾದಗಳನ್ನು ಅರ್ಪಿಸಿದ್ದಾರೆ.