ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆದರೆ ದಸರಾ ಆಹ್ವಾನ ತಿರಸ್ಕರಿಸಿ: ಬಾನು ಮುಷ್ತಾಕ್ ಅವರಿಗೆ ಮನವಿ

ಹಾಸನ: ಸಾಹಿತಿ ಬಾನು ಮುಷ್ತಾಕ್ ಅವರು ಭುವನೇಶ್ವರಿ ಕುರಿತು ಮಾತನಾಡಿ ಹಿಂದು ಸಂಪ್ರದಾಯಕ್ಕೆ ಅವಮಾನ ಮಾಡಿದ್ದು ಅವರು ದಸರಾ ಉದ್ಘಾಟಿಸುವುದು ಬೇಡವೆಂದು ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಸಾಹಿತಿ ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿದ ಪದಾಧಿಕಾರಿಗಳು, ನೀವು ಭುವನೇಶ್ವರಿ ಕುರಿತು ಮಾತನಾಡಿದ್ದು ಖಂಡನೀಯ. ಅದರಿಂದ ಕನ್ನಡಿಗರಿಗೆ ಅವಮಾನವಾಗಿದೆ. ಆ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿದ್ದಾರೆ. ದಸರಾ ನಾಡಹಬ್ಬವಾದರು ಅದು ನಮ್ಮ ಹಿಂದೂ ಸಂಪ್ರದಾಯದ ಹಬ್ಬ. ಹಾಗಾಗಿ ನಮ್ಮ ಸಂಸ್ಕೃತಿ ಒಪ್ಪದ ನೀವು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಿರಿ. ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆದರೆ ದಸರಾ ಉದ್ಘಾಟನೆಯಿಂದ ನೀವೆ ಹಿಂದೆ ಸರಿಯಿರಿ ಎಂದು ಮನವಿ ಸಲ್ಲಿಸಿದರು.