ದೆಹಲಿ: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಟಿ.ಶೆಟ್ಟಿಗೇರಿಯ ವೃಂದ ಬೋಜಮ್ಮ ಆಯ್ಕೆ
ಮಡಿಕೇರಿ :ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಜಿಲ್ಲೆಯ ಟಿ.ಶೆಟ್ಟಿಗೇರಿಯ ವೃಂದ ಬೋಜಮ್ಮ ಎಂ. ಅವರು ಆಯ್ಕೆಯಾಗಿದ್ದಾರೆ.
ಉತ್ತರಖಾಂಡ್ ಡೆಹರಡೂನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಿರುವ ವೃಂದ ಬೋಜಮ್ಮ ಅವರು ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ. ವೃಂದ ಬೋಜಮ್ಮ ಅವರು ಟಿ.ಶೆಟ್ಟಿಗೇರಿಯ ಮುಕ್ಕಾಟಿರ ನಂದ ಮುತ್ತಣ್ಣ ಹಾಗೂ ಸುಮಿತ್ರ ಅವರ ಪುತ್ರಿಯಾಗಿದ್ದಾಳೆ.