ಶಾಲೆಗೆ ಹೋಗು ಎಂದಿದ್ದಕ್ಕೆ 11ನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತೇ!

Mar 25, 2026 - 23:46
 0  1.1k
ಶಾಲೆಗೆ ಹೋಗು ಎಂದಿದ್ದಕ್ಕೆ  11ನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತೇ!
Stabs; photo credit;I stock

ತಮಿಳುನಾಡಿನ, ಮಾರ್ಚ್ 25: ಶಾಲೆಗೆ ಹೋಗದೆ ಗೆಳೆಯರ ಜೊತೆ ಓಡಾಡಿಕೊಂಡಿದ್ದಕ್ಕಾಗಿ ಮಹಿಳೆಯೊಬ್ಬರು 11ನೇ ತರಗತಿ ವಿದ್ಯಾರ್ಥಿಗೆ ಗದರಿದ್ದರು. ಇದೇ ಕಾರಣದಿಂದ ಆತ ಆ ಮಹಿಳೆಯ ಮೇಲೆ ಚಾಕುವಿನಿಂದ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ್ದಾನೆ.

16 ವರ್ಷದ ಆ ವಿದ್ಯಾರ್ಥಿಯನ್ನು ಅರಕ್ಕೋಣಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಊರಿನಲ್ಲಿ ಆಘಾತ ಸೃಷ್ಟಿಸಿದೆ. ರಾಣಿಪೇಟೆ ಜಿಲ್ಲೆಯ ಅರಕ್ಕೋಣಂನ ಓಥವಡೈ ಬೀದಿಯಲ್ಲಿ ವಾಸಿಸುವ ಸರವಣನ್ ಮತ್ತು ಸತ್ಯ ದಂಪತಿಗೂ ಆ ಬಾಲಕನ ಕುಟುಂಬಕ್ಕೂ ಬಹಳ ಪರಿಚಯವಿತ್ತು.

ಸರವಣನ್ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸ್ನೇಹಿತ ಲಕ್ಷ್ಮಿಪತಿ ಕೂಡ ಅದೇ ವೃತ್ತಿಯಲ್ಲಿದ್ದರು. ಈ ಇಬ್ಬರೂ ಪರಸ್ಪರರ ಮನೆಗೆ ಬಂದು ಹೋಗುತ್ತಿದ್ದುದರಿಂದ ಅವರ ಕುಟುಂಬಕ್ಕೂ ಅವರಿಬ್ಬರ ಗೆಳೆತನ ಗೊತ್ತಿತ್ತು. 

ಲಕ್ಷ್ಮಿಪತಿಯ 16 ವರ್ಷದ ಮಗ ಸತ್ಯ ಅವರ ಮನೆಗೆ ಆಗಾಗ ಭೇಟಿ ನೀಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದ. ಆತ ಕಳೆದ ಮೂರ್ನಾಲ್ಕು ದಿನಗಳಿಂದ ಶಾಲೆಗೆ ಹೋಗಿಲ್ಲ ಎಂಬ ವಿಷಯ ಸತ್ಯ ಅವರಿಗೆ ಗೊತ್ತಾಗಿತ್ತು. ಅವನು ತನ್ನ ಗಂಡನ ಸ್ನೇಹಿತನ ಮಗನಾಗಿದ್ದರಿಂದ ಸತ್ಯ ಆತನನ್ನು ಕರೆದು ಅಪ್ಪ-ಅಮ್ಮ ಹೇಳಿದ್ದನ್ನು ಕೇಳಬೇಕು, ದಿನವೂ ಶಾಲೆಗೆ ಹೋಗಬೇಕೆಂದು ಸಲಹೆ ನೀಡಿದ್ದರು. ಈ ವೇಳೆ ಕೋಪದಿಂದ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸತ್ಯ ಅವರ ಮನೆಯಿಂದ ಕಿರುಚಾಟಗಳು ಕೇಳಿಬಂದವು. ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ ಚಾಕು ಹಿಡಿದು ನಿಂತಿದ್ದ ವಿದ್ಯಾರ್ಥಿಯನ್ನು ನೋಡಿದರು. ಅವನು “ಯಾರಾದರೂ ಹತ್ತಿರ ಬಂದರೆ, ನಾನು ನಿಮ್ಮನ್ನು ಇರಿದು ಹಾಕುತ್ತೇನೆ” ಎಂದು ಬೆದರಿಸುತ್ತಾ ಓಡಿಹೋದ. ಅವರೆಲ್ಲ ಮನೆಯೊಳಗೆ ಹೋಗಿ ನೋಡಿದಾಗ ಇಡೀ ರೂಂ ರಕ್ತದಲ್ಲಿ ಮುಳುಗಿರುವುದನ್ನು ನೋಡಿ ಗಾಬರಿಗೊಂಡರು. ಸತ್ಯಾಳ ದೇಹದಾದ್ಯಂತ ಹಲವು ಕಡೆ ಇರಿತದ ಗಾಯಗಳಿದ್ದವು.

ಈ ಘಟನೆಯ ಬಗ್ಗೆ ಅರಕ್ಕೋಣಂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯಾಳನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ತಿರುವಳ್ಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಕೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆ ವಿದ್ಯಾರ್ಥಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 3
Wow Wow 0