ಜಿಲ್ಲೆಯ ನಗರ ಪ್ರದೇಶಗಳ್ಲಲಿ ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ

ಜಿಲ್ಲೆಯ ನಗರ ಪ್ರದೇಶಗಳ್ಲಲಿ ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ
Photo credit: hindusatn times Karnataka

ಮಡಿಕೇರಿ: ಕೊಡಗು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ್ಲಿ PMAY(U)2.0 ಯೋಜನೆಯಡಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಯುತ್ತಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ನಿವೇಶನ ಹೊಂದಿರುವ ಅಥವಾ ಹಳೆಯ ಕಚ್ಚಾ ಮನೆಯಲ್ಲಿ ವಾಸವಿರುವಂತಹ (ಸ್ವಂತ RCC ಮನೆ ಹೊಂದಿರಬಾರದು) ಇದುವರೆಗೂ ಯಾವುದೇ ವಸತಿ ಯೋಜನೆಗಳ ಸೌಲಭ್ಯ ಪಡೆಯದೇ ಇರುವ ವಾರ್ಷಿಕ ರೂ,3.00 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿವಾಹಿತ ಮಹಿಳೆಯರು, ಗೃಹಿಣಿಯರು, ಮಾಜಿ ಸೈನಿಕರು, ವಿಧವೆಯರು, ಅಂಗವಿಕಲರು, ಹಿರಿಯ ನಾಗರೀಕರು ವಿಷೇಶವಾಗಿ ಸಪಾಯಿ ಕರ್ಮಚಾರಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯ ಕರ್ತೆಯರು, ಪಿ.ಎಂ.ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನಿವೇಶನ/ಹಳೆ ಕಚ್ಚಾ ಮನೆಯ ದಾಖಲೆಗಳು ಹಾಗೂ ಜಾತಿ & ಆಧಾಯ ಪ್ರಮಾಣ ಪತ್ರದೊಂದಿಗೆ PMAY(U)2.0 (https://pmaymis.gov.in) ಪೋರ್ಟಲ್ ನಲ್ಲಿ ಸ್ವಂತವಾಗಿ / ಗ್ರಾಹಕ ಸೇವಾ ಕೇಂದ್ರಗಳಲ್ಲಿ / ನಗರ ಸ್ಥಳೀಯ ಸಂಸ್ಥೆಗಳ್ಲಲಿ ನೊಂದಣಿ ಮಾಡಿಸಿ ಎಲ್ಲಾ ದಾಖಲೆಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಗೆ ಸಲ್ಲಿಸಲು ತಿಳಿಸಿದೆ‌ ಎಂದು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆ ಮಡಿಕೇರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ‌.