ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾರವಾರ: ಸಂಶೋಧನಾ ವಿದ್ಯಾರ್ಥಿ ಶ್ರೀಮತಿ. ಅರ್ಪಿತಾ ಜಿ. ಎ. ಅವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ

Jul 7, 2025 - 13:49
Jul 7, 2025 - 13:49
 0  39
ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾರವಾರ: ಸಂಶೋಧನಾ ವಿದ್ಯಾರ್ಥಿ ಶ್ರೀಮತಿ. ಅರ್ಪಿತಾ ಜಿ. ಎ. ಅವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶ್ರೀಮತಿ. ಅರ್ಪಿತಾ ಜಿ. ಎ. ಅವರು ಮಂಡಿಸಿದ್ದ ಮಹಾಪ್ರಬಂಧವನ್ನು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೈನ್ಸಸ್ ವಿಭಾಗದಲ್ಲಿ ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಸದರಿಯವರು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾರವಾರದ ಇ ಅಂಡ್ ಸಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಎ. ಎಲ್. ಚೂಡಾರತ್ನಾಕರ ರವರ ಮಾರ್ಗದರ್ಶನದಲ್ಲಿ “Landslide Susceptibility Mapping for Kodagu Region using Machine Learning Techniques” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಂಡು ಮಹಾಪ್ರಬಂಧವನ್ನು ವಿಟಿಯುಗೆ ಸಾಧರಪಡಿಸಿದ್ದಾರೆ. ಈ ಸಂಶೋಧನಾ ಮಹಾ ಪ್ರಬಂಧದಲ್ಲಿ ಕೊಡಗು ಜಿಲ್ಲೆಯ ಸಮಗ್ರ ಭೂಕುಸಿತ ಸಂವೇದನಾಶೀಲತೆಯ ನಕ್ಷೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿವರವಾದ ಭೂ ಕುಸಿತ ದಾಸ್ತಾನು ನಕ್ಷೆಯನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಹೆಚ್ಚಿನ ಸಂಶೋಧನೆ ಮತ್ತು ವಿಪತ್ತು ನಿರ್ವಹಣಾ ಪ್ರಯತ್ನಗಳನ್ನು ಬೆಂಬಲಿಸಲು ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ದತ್ತಾಂಶವು ಲಭ್ಯವಾಗುವಂತೆ ಮಾಡಲಾಗಿದೆ.

ಶ್ರೀಮತಿ ಅರ್ಪಿತಾ ಜಿ. ಎ. ಅವರು ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಂತ್ರಜ್ಞಾನ (SDMIT) ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್‌ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಭಾರತೀಯ ವಾಯುಪಡೆಯಲ್ಲಿ ಸೇವೆ ನಿರ್ವಹಿಸುತ್ತಿರುವ ಶ್ರೀ ಯಶವಂತ್ ಪಿ. ಜಿ. ಅವರ ಧರ್ಮಪತ್ನಿಯಾಗಿದ್ದು, ಶ್ರೀ ಜಿ. ಎನ್. ಅಚಯ್ಯ (ನಿವೃತ್ತ ಬಿಎಸ್ ಎನ್. ಎಲ್. ಉದ್ಯೋಗಿ) ಮತ್ತು ಶ್ರೀಮತಿ ವೇದಾವತಿ (ನಿವೃತ್ತ ಶಿಕ್ಷಕಿ) ದಂಪತಿಯ ಪುತ್ರಿಯಾಗಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಲಾ ಬಿ, ವಿಭಾಗಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಬಂಧು- ಮಿತ್ರರು ಮತ್ತು ಹಿತೈಷಿಗಳು ಅಭಿನಂದಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1