ದುಬಾರೆ ಸಾಕಾನೆ ಶಿಬಿರಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭೇಟಿ
ದುಬಾರೆ; ಕೊಡಗು ಜಿಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರಕ್ಕೆ ಸೋಮವಾರ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿ ಸಾಕಾನೆ ಶಿಬಿರ ವೀಕ್ಷಣೆ ಮಾಡಿದರು. ಸಾಕಾನೆ ಶಿಬಿರ ಹಾಗೂ ಸುತ್ತಮುತ್ತಲ ಪರಿಸರ ವೀಕ್ಷಣಾಲಯದ ಮಾಡಿದ ಅವರು ಸಾಕಾನೆ ಶ್ರೀರಾಮ ದೊಂದಿಗೆ ಸೆಲ್ಫಿ ತೆಗೆದುಕೊಂಡ ಸಂತಸ ಪಟ್ಟರು. ಈ ಸಂದರ್ಭ ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್ ಹಾಗೂ ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳು,ಮಾವುತರು ಇದ್ದರು.
