ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ 53ನೇ ವರ್ಷಾಚರಣೆ

ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ 53ನೇ ವರ್ಷಾಚರಣೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು:ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ ನ 53ನೇ ವರ್ಷಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬ್ಯಾಂಕ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಎಜಿಎಂ ಡಾ.ಟಿ. ಆರ್ ಅರುಣ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

 ಕರ್ನಾಟಕ ಬ್ಯಾಂಕ್ ಚೆಯ್ಯಂಡಾಣೆ ಶಾಖೆಯ ವ್ಯವಸ್ಥಾಪಕರಾದ ಬಾಲಕೃಷ್ಣರವರು 53ನೇ ವರ್ಷಾಚರಣೆ ಆಚರಿಸುವ ಬ್ಯಾಂಕಿನ ಕಾರ್ಯವೈಖರಿಯ ಕುರಿತು ಮಾತನಾಡಿದರು. ಈ ಸಂದರ್ಭ ಗ್ರಾಹಕಾರದ ಈರಪ್ಪ ಸಿ.ಕೆ, ದಿಲೀಪ್ ಬಿ.ಸಿ, ನಾರಾಯಣ ಮೂರ್ತಿ,ಕುಮ್ಮಂಡ ಮೊಣ್ಣಪ್ಪ,ಪಿ.ಡಿ.ಮನೋಜ್, ರಣಜಿತ್, ಬ್ಯಾಂಕ್ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.