ಕುಶಾಲನಗರ: ಸಾರಿಗೆ ಬಸ್ ನಿಲ್ದಾಣದಲ್ಲಿ ಎರಡೂವರೆ ಲಕ್ಷ ರೂ ಕಳ್ಳತನ
ಕುಶಾಲನಗರ, ನ 28: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ರೂ ಎರಡೂವರೆ ಲಕ್ಷ ಹಣ ಕಳ್ಳತನ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕಮರವಳ್ಳಿ ಗ್ರಾಮದ ಸೋಮಶೇಖರ್ ಎಂಬವರು ಬ್ಯಾಗಿನಲ್ಲಿ 10 ಲಕ್ಷ ಹಣವನ್ನು ಮೈಸೂರಿಗೆ ಕೊಂಡೊಯ್ಯವ ಸಂದರ್ಭಸಾರಿಗೆ ನಿಲ್ದಾಣದಲ್ಲಿ ಬ್ಯಾಗಿಗೆ ಕನ್ನ ಹಾಕಿರುವ ಚೋರರು ಎರಡೂವರೆ ಲಕ್ಷ ಹಣ ಲಪಟಾಯಿಸಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.