ಕುಶಾಲನಗರ; ಬೈಕ್ ಡಿಕ್ಕಿಯಾಗಿ ಮೃತಪಟ್ಟ ಕಾಡು ಕುರಿ
ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ. ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್ ಅವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಕುಶಾಲನಗರ ಸಂಚಾರ ಪೊಲೀಸರು, ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.