ಮಡಿಕೇರಿ;ವನ್ಯ ಜೀವಿಗಳಿಂದ ದಾಳಿ ಹಾಗೂ ಸಂಘರ್ಷವನ್ನು ಖಂಡಿಸಿ ನಾಳೆ ಅರಣ್ಯ ಭವನದ ಮುಂಭಾಗ ಬಿಜೆಪಿ ಪ್ರತಿಭಟನೆ
ಮಡಿಕೇರಿ: ಅರಣ್ಯ ಭವನದ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ನಾಳೆ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯ ಜೀವಿಗಳಿಂದ ದಾಳಿ ಹಾಗೂ ಸಂಘರ್ಷವನ್ನು ಖಂಡಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ.