ಮಡಿಕೇರಿ:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೃಷ್ಣಮೂರ್ತಿ ಅಮಾನತು
ಮಡಿಕೇರಿ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಸಿ.ಎಸ್.ಆರ್ ನಿಯಮಗಳನ್ನು ಉಲ್ಲಂಘಿಸಿ , ಘನ ಸದನದ ಸದಸ್ಯನಾದ ನನ್ನ ವಿರುದ್ಧ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ನನ್ನ ಹಕ್ಕಿಗೆ ಚ್ಯುತಿ ಬರುವಂತೆ ವರ್ತಿಸಿರುವುದು ನನಗೆ ನೋವುಂಟಾಗಿದೆ. ಆದ್ದರಿಂದ ಈ ಅಧಿಕಾರಿಯ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡಿದ್ದಕ್ಕಾಗಿ ಘನ ಸರ್ಕಾರ ಜಿಲ್ಲಾ ಅಧಿಕಾರಿ ಅವರನ್ನು ಅಮಾನತ್ತಿನಲ್ಲಿ ಇರಿಸಿ ಆದೇಶಿಸಿದೆ ಎಂದು, ಎಂ.ಎಲ್.ಸಿ ಶಾಸಕ ಎಂ.ಪಿ ಸುಜಾ ಕುಶಾಲಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.