ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ.11 ರಂದು ಬೃಹತ್ ಪ್ರತಿಭಟನೆ

Aug 26, 2026 - 19:29
 0  70
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ.11 ರಂದು ಬೃಹತ್ ಪ್ರತಿಭಟನೆ

ಮಡಿಕೇರಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ.11 ರಂದು ಕೊಡಗಿನಲ್ಲಿ 20 ಸಾವಿರಕ್ಕೂ ಅಧಿಕ ರೈತರು ಬೀದಿಗಿಳಿಯಲಿದ್ದಾರೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.

ಪರಿಸರ ಸೂಕ್ಷ್ಮ ವಲಯದಿಂದ ಜಿಲ್ಲೆಯ 53 ಜನವಸತಿ ಗ್ರಾಮಗಳನ್ನು ಕೈಬಿಡಬೇಕು, 1 ಕಿ.ಮೀ. ಬಫರ್ ಝೋನ್ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಬೆಳಗ್ಗೆ 11ಕ್ಕೆ ಸುದರ್ಶನ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬಳಿಕ ಗಾಂಧಿ ಮೈದಾನದಲ್ಲಿ ಸಭೆ ನಡೆಯಲಿದೆ ಎಂದರು.ಬ್ರಿಟಿಷ್ ಕಾಲದ ಸೆಕ್ಷನ್ 4 ಇಟ್ಟುಕೊಂಡು ರೈತರಿಗೆ ಕಿರುಕುಳ ನೀಡಲಾಗುತ್ತಿದೆ, ಮುಕ್ಕೊಡ್ಲು ರೈತನ ತೋಟ ನಾಶ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕರಾದ ದರ್ಶನ್, ಮಧು ಬೋಪಣ್ಣ , ರತೀಶ್ ಮಂದಣ್ಣ, ಲೋಕೇಶ್, ಸಂಗಮ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0