ಪ್ರಕೃತಿ ವಿಕೋಪ ನಿರ್ವಹಣೆ:ಕೊಡಗು ಮೇಲುಸ್ತುವಾರಿಯಾಗಿ ಸಚಿವ ಯು.ಟಿ ಖಾದರ್ ನೇಮಕ

ಪ್ರಕೃತಿ ವಿಕೋಪ ನಿರ್ವಹಣೆ:ಕೊಡಗು ಮೇಲುಸ್ತುವಾರಿಯಾಗಿ ಸಚಿವ  ಯು.ಟಿ ಖಾದರ್ ನೇಮಕ

ಬೆಂಗಳೂರು, ಜೂ. 26: ಮುಂಗಾರು ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಾಗಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಹಾಗೂ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಿ ಆದೇಶ ಹೊರಡಿಸಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ. ಕೊಡಗು ಜಿಲ್ಲೆಯ ಮೇಲುಸ್ತುವಾರಿ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ವಹಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ ಜಿಲ್ಲೆಗಳ ಜವಬ್ದಾರಿ ಕೂಡ ಯು.ಟಿ ಖಾದರ್ ಅವರಿಗೆ ನೀಡಲಾಗಿದೆ