ಪೊನ್ನಂಪೇಟೆ: ಗಮನಸೆಳೆದ ಕೆಸರುಗದ್ದೆ ಕ್ರೀಡಾಕೂಟ

ಪೊನ್ನಂಪೇಟೆ: ಗಮನಸೆಳೆದ ಕೆಸರುಗದ್ದೆ ಕ್ರೀಡಾಕೂಟ

ಪೊನ್ನಂಪೇಟೆ :ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿರಿ ಎಂಬಲ್ಲಿ ಚೀರಿಯಪಂಡ ಮಣಿ ಉತ್ತಪ್ಪ ಹಾಗೂ ಹ್ಯಾರಿ ತಿಮ್ಮಯ್ಯ ಅವರ ಗದ್ದೆಯಲ್ಲಿ ಗ್ರಾಮ ವಿಕಾಸ್ ವತಿಯಿಂದ ಮೂರನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟವನ್ನು ಗ್ರಾಮ ವಿಕಾಸ್ ಸಂಯೋಜಕರಾದ ಚೆಪ್ಪುಡಿರ ಸುನೀಲ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಿರುಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಜ್ಯೋತಿ ಬೆಳಗುವುದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಜತೆಗೆ ಪರಸ್ಪರ ಒಗ್ಗಟ್ಟು ಮೂಡಲು ಸಹಕಾರಿಯಾಗಿದೆ ಎಂದರು. ಚಾರಿಮoಡ ದೇವಯ್ಯ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸಿ ಬೆಳೆಸಲು ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಗ್ರಾಮಸ್ಥರೆಲ್ಲಾ ಒಂದೆಡೆ ಕಲೆತು ಪ್ರಕೃತಿಯ ಹಬ್ಬವನ್ನು ಸವಿಯುತ್ತಿರುವುದು ಶ್ಲಾಘನೀಯ. ಕ್ರೀಡಾಕೂಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವೆಂದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ 5 ರಿಂದ 10 ವರ್ಷದೊಳಗಿನ ಮಕ್ಕಳ ಓಟದ ಸ್ಪರ್ಧೆ, 15 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಓಟದ ಸ್ಪರ್ಧೆ, ಪುಟಾಣಿ ಮಕ್ಕಳಿಗೆ ನಿಧಿ ಶೋಧನೆ ಸ್ಪರ್ಧೆ, ಪುರುಷರು ಹಾಗೂ ಮಹಿಳೆಯರ ಮತ್ತು ಬಾಲಕ ಹಾಗೂ ಬಾಲಕಿಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯಿತು. ಪುರುಷರು ಹಾಗೂ ಮಹಿಳೆಯರ ಮತ್ತು ಬಾಲಕರು ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆ- ಕಂಬ ಸುತ್ತಿ ಓಡುವ ಸ್ಪರ್ಧೆ ನೆರೆದಿದ್ದವರ ಗಮನ ಸೆಳೆಯಿತು. ಪುಟಾಣಿ ಮಕ್ಕಳ ನಿಧಿ ಶೋಧನೆ ಸ್ಪರ್ಧೆ ಕ್ರೀಡಾಕೂಟದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

 ಬಹುಮಾನ ವಿತರಣೆ:-

ಕೆಸರು ಗದ್ದೆ ಕ್ರೀಡಾಕೂಟ ಪುರುಷರ ಮುಕ್ತ ಓಟದ ಸ್ಪರ್ಧೆಯಲ್ಲಿ ಸುಮನ್ ಪ್ರಥಮ ಹಾಗೂ ಹರ್ಷಿತ್ ದ್ವಿತೀಯ ಸ್ಥಾನ ಪಡೆದುಕೊಂಡರೆ ಮಹಿಳೆಯರ ಕೆಸರು ಗದ್ದೆ ಓಟದ ವಿಭಾಗದಲ್ಲಿ ವಿನ್ಯಾ ಪ್ರಥಮ ಹಾಗೂ ಉಷಾ ದ್ವಿತೀಯ ಸ್ಥಾನ ಪಡೆದುಕೊಂಡರು. 5 ರಿಂದ 10 ವರ್ಷದೊಳಗಿನ ಗಂಡು ಮಕ್ಕಳ ಓಟದ ಸ್ಪರ್ಧೆಯಲ್ಲಿ ಗೌತಮ್ ಪ್ರಥಮ ಹಾಗೂ ಧ್ಯಾನ ದ್ವಿತೀಯ ಸ್ಥಾನ ಪಡೆದುಕೊಂಡರೆ 5 ರಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ವೇಕ್ಷ ಪ್ರಥಮ ಹಾಗೂ ಆರಾಧ್ಯ ದ್ವಿತೀಯ ಸ್ಥಾನ ಪಡೆದುಕೊಂಡರು. 10 ರಿಂದ 15 ವರ್ಷದೊಳಗಿನ ಗಂಡು ಮಕ್ಕಳ ಓಟದ ಸ್ಪರ್ಧೆಯಲ್ಲಿ ಮಹೇಶ್ ಪ್ರಥಮ ಹಾಗೂ ಕೌಶಿಕ್ ದ್ವಿತೀಯ ಸ್ಥಾನ ಪಡೆದುಕೊಂಡರೆ 10 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನ ಚಿಂತನಾ ದೇಚಮ್ಮ ಹಾಗೂ ಧರಣಿ ದ್ವಿತೀಯ ಸ್ಥಾನ ಪಡೆದುಕೊಂಡರು. ಕಂಬ ಸುತ್ತಿ ಓಡುವ ಗಂಡು ಮಕ್ಕಳ ವಿಭಾಗದಲ್ಲಿ ಗೌರವ್ ಪ್ರಥಮ ಹಾಗೂ ಧಮನ್ ದ್ವಿತೀಯ ಸ್ಥಾನ ಪಡೆದುಕೊಂಡರೆ 5ರಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರೇಕ್ಷಾ ಪ್ರಥಮ ಹಾಗೂ ಚಿಂತನ ದೇಚಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು. 10 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳ ಕಂಬ ಸುತ್ತಿ ಓಡುವ ಓಟದ ಸ್ಪರ್ಧೆಯಲ್ಲಿ ಪೊನ್ನಮ್ಮ ಪ್ರಥಮ ಹಾಗೂ ಶ್ರಾವ್ಯ ದ್ವಿತೀಯ ಸ್ಥಾನ ಪಡೆದುಕೊಂಡರು. ಪುಟ್ಟ ಮಕ್ಕಳ ನಿಧಿ ಶೋಧನೆ ಸ್ಪರ್ಧೆಯಲ್ಲಿ ಶಮಂತ್ ಪ್ರಥಮ ಸ್ಥಾನ ಹಾಗೂ ಸ್ವಾಗತ್ ದ್ವಿತೀಯ ಸ್ಥಾನ ಪಡೆದುಕೊಂಡರು. ಪುರುಷರ ಕೈ ಚೆಂಡು ಸ್ಪರ್ಧೆಯಲ್ಲಿ ಏಳು ತಂಡಗಳು ಭಾಗವಹಿಸಿ ಕೆ. ಎಸ್. ಸಿ ಕಿರಗೂರು ಜಯಶಾಲಿಯಾಗಿ ಡಾಲ್ಫಿನ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಹಿಳೆಯರ ಕೈಚಂಡು ವಿಭಾಗದಲ್ಲಿ ನಾಲ್ಕು ತಂಡಗಳು ಭಾಗವಹಿಸಿ ಕುಟ್ಟಿಚಾತ ಯುವತಿ ಮಂಡಳಿ ಜಯಶಾಲಿಯಾಗಿ ಕೂರ್ಗ್ ಲೆಜಂಡ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕುಟ್ಟಿಚಾತ ಮಂಡಳಿ ಜಯಗಳಿಸಿ ಪಂಜಿರಿ ಚಾಮುಂಡಿ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪುರುಷರ ಹಗ್ಗ ಜಗ್ಗಟ್ಟ ಸ್ಪರ್ಧೆಯಲ್ಲಿ ಏಳು ತಂಡಗಳು ಭಾಗವಹಿಸಿದ್ದು ತೀರ ಹಣಹಣಿಯಲ್ಲಿ ನಡೆದ ಪಂದ್ಯಾಟದಲ್ಲಿ ವಿನಾಯಕ ಬಳಗ ಜಯಶಾಲಿಯಾಗಿ ಕೆ ಎಸ್ ಸಿ ಕಿರಗೂರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಕ್ಕಳ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೊನ್ನಿಕೊಪ್ಪಲು ತಂಡ ಜಯಗಳಿಸಿ ಸಾಯಿ ಶಂಕರ್ ಎ ತಂಡ ಎರಡನೇ ಸ್ಥಾನ ಪಡೆದುಕೊಂಡಿತು.

ಕಿರುಗೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನಿತಾ, ಕಾರ್ಯದರ್ಶಿ ರಾಧಾ, ಸದಸ್ಯರಾದ ಪೆಮ್ಮಂಡ ಸುಮಿತ್ರ, ಚೀರಿಯಪಂಡ ರೇಖಾ ಕೀರ್ತನ್, ಸುಭಿಕ್ಷಾ, ರಾಘವ, ಚೀರಿಯಪಂಡ ದೇವಯ್ಯ, ಗದ್ದೆಯ ಮಾಲೀಕರಾದ ಮಣಿ ಉತ್ತಪ್ಪ, ಹ್ಯಾರಿ ತಿಮ್ಮಯ್ಯ , ಗ್ರಾಮ ವಿಕಾಸ ಮಂಡಳಿ ಪ್ರಮುಖ ಕಾಕಮಾಡ ಹರೀಶ್, ಗ್ರಾಮ ವಿಕಾಸ ಸಂಯೋಜಕಿ ರಾಣಿ ಪೂವಮ್ಮ, ಗ್ರಾಮದ ಸ್ವಯಂ ಸೇವಕರು, ಆರ್. ಎಸ್. ಎಸ್ ಕಾರ್ಯಕರ್ತರು, ತೀರ್ಪುಗಾರರಾದ ಪಿ. ಎಸ್ ಸುರೇಶ, ಎ.ಪಿ ರಾಜೇಶ್, ಪಿ. ಡಿ ಪಾಪು, ನವೀನ್ ಎ. ಆರ್ ಹಾಗೂ ಗ್ರಾಮಸ್ಥರಾದ ಚೀರಿಯಪಂಡ ದೇವಯ್ಯ ಇದ್ದರು. ಕ್ರೀಡಾಕೂಟದ ಅಂತ್ಯದಲ್ಲಿ ನವೀನ್ ಹಾಗೂ ಚಾರಿಮಂಡ ದೇವಯ್ಯ ಅವರ ಹಾಡಿಗೆ ಹಾಗೂ ಕೊಡಗು ಸಾಂಪ್ರದಾಯಿಕ ವಾಲಗಕ್ಕೆ ಅಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

 ವರದಿ:ಚಂಪಾ ಗಗನ ಪೊನ್ನಂಪೇಟೆ