ಸಿದ್ದಾಪುರ:ಹಸುಗಳ ಮೇಲೆ ಚಿರತೆ ದಾಳಿ

ಸಿದ್ದಾಪುರ:ಹಸುಗಳ ಮೇಲೆ ಚಿರತೆ ದಾಳಿ

ಸಿದ್ದಾಪುರ; ಹಸುಗಳ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಗೂಡುಗದ್ದೆಯಲ್ಲಿ ನಡೆದಿದೆಮ ಮನೆಯ ಪಕ್ಕದಲ್ಲೇ ಕಟ್ಟಿದ್ದ ಹಸುಗಳ ಮೇಲೆ ಚಿರತೆ ದಾಳಿ ನಡೆಸಿದ್ದು,ಚಿರತೆ ದಾಳಿಗೆ ಹಸುಗಳು ಗಂಭೀರ ಗಾಯಗೊಂಡಿವೆ.

ಗ್ರಾಮದ ಉಮೇಶ್ (ಜಪ್ಪು) ಎಂಬುವವರಿಗೆ ಸೇರಿದ ಹಸುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ರಾತ್ರಿ 9.30ರ ಸುಮಾರಿಗೆ ನಡೆದ ಘಟನೆ ನಡೆದಿದೆ.ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು,ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಇಲಾಖೆ ಸೂಚನೆ ನೀಡಿದೆ.