ಸೋಮವಾರಪೇಟೆ ತಾಲ್ಲೂಕು ಬಂದ್:ಆಲೂರು ಸಿದ್ದಾಪುರ, ಮಾಲಂಬಿ ಭಾಗದಲ್ಲಿ ಬೆಂಬಲ
ಆಲೂರು ಸಿದ್ದಾಪುರ: ಸೋಮವಾರಪೇಟೆ ತಾಲೂಕು ಬಂದ್ ಗೆ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ, ಮಾಲಂಬಿ ಸೇರಿದಂತೆ ಸುತ್ತಮುತ್ತಲಿನ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಕೆಲ ಅಂಗಡಿ ಮುಂಗಟ್ಟು ತೆರೆದಿದ್ದರಿಂದ ರೈತ ಸಂಘ ಕಾಫಿ ಬೆಲೆಗಾರರ ಸಂಘ, ಸೇರಿದಂತೆ ಇತರೆ ಸಂಘಟನೆಗಳು ಮುಚ್ಚಿಸಿದರು. ಆಟೋ ಚಾಲಕರು ವರ್ತಕರು ವಾಹನ ಚಾಲಕರು ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿದರು.