ಸೋಮವಾರಪೇಟೆ ತಾಲ್ಲೂಕು ಬಂದ್:ಶನಿವಾರಸಂತೆಯಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಹೋರಾಟ ಸಮಿತಿ
ಶನಿವಾರಸಂತೆ : ಸೋಮವಾರಪೇಟೆ ತಾಲೂಕು ಬಂದ್ ಹಿನ್ನಲೆ ರೈತ ಹೋರಾಟ ಸಮಿತಿ, ಕಾಫಿ ಬೆಲೆಗಾರರ ಸಂಘ, ವರ್ತಕರ ಸಂಘಟನೆ ಸೇರಿದಂತೆ ಇತರೆ ಸಂಘಟನೆ ಪ್ರಮುಖರು, ಕಾಫಿ ಬೆಳೆಗರಾರು ಇಂದು ಶನಿವಾರಸಂತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದರು. ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ನಮ್ಮ ಜಾಗವನ್ನು ವಶ ಪಡಿಸಿಕೊಳ್ಳಲು ಮುಂದಾಗಬಾರದು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.