ಶ್ರೀಮಂಗಲ: ಕಾಯಿಮನಿ ಬಳಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ
ಪೊನ್ನಂಪೇಟೆ; ತಾಲೂಕಿನ ಶ್ರಿಮಂಗಲ ಹೋಬಳಿಯ ಕುರ್ಚಿ ಕಾಯಿಮನಿ ನಡುವಿನ ನಿವಾಸಿ ಮೂಕಳೆರ ರತ್ತು ಎಂಬುವರು ಮನೆಯ ಸಮೀಪ ತೋಟದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ರತ್ತು ಅವರು ಈ ಹಿಂದೆ ಅಪಘಾತಕ್ಕೆ ಸಿಲುಕಿ ಅಂಗವೈಖಲ್ಯ ಹೊಂದಿದ್ದು, ಕಾಡಾನೆ ದಾಳಿಗೆ ಸಿಲುಕಿದ್ದಾರೆ. ಬೆಳ್ಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಕಾಡಾನೆ ದಾಳಿ ನಡೆದಿದೆ. ರತ್ತು ಅವರ ಮೃತದೇಹವನ್ನು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ .
