ವಿರಾಜಪೇಟೆ:ಅಕ್ರಮ ಲಾಟರಿ ಮಾರಾಟ: ಕೇರಳ ರಾಜ್ಯದ ವ್ಯಕ್ತಿ ಬಂಧನ,ಲಾಟರಿ ವಶಕ್ಕೆ

Jun 27, 2025 - 23:34
Jun 27, 2025 - 23:50
 0  246
ವಿರಾಜಪೇಟೆ:ಅಕ್ರಮ ಲಾಟರಿ ಮಾರಾಟ: ಕೇರಳ ರಾಜ್ಯದ ವ್ಯಕ್ತಿ ಬಂಧನ,ಲಾಟರಿ ವಶಕ್ಕೆ

ವಿರಾಜಪೇಟೆ: ಕರ್ನಾಟಕ ರಾಜ್ಯದಲ್ಲಿ ಲಾಟರಿ ನಿಷೇಧಿಸಿ ದಶಕಗಳೇ ಕಳೆದಿದ್ದರು ಕೂಡ ಅಂತರ್ ರಾಜ್ಯದಿಂದ ಅಕ್ರಮವಾಗಿ ಲಾಟರಿ ತಂದು ನಗರದಲ್ಲಿ ಮಾರಾಟ ಮಾಡುತಿದ್ದ ಕೇರಳ ರಾಜ್ಯ ಮೂಲದ ವ್ಯಕ್ತಿಯನ್ನು ಬಂಧನ ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೂತುಪರಂಬು ನಿವಾಸಿ ಲೇಟ್ ಬಾಲನ್ ಎಂಬುವವರ ಪುತ್ರ ಮೋಹನ್ ( 41 ವರ್ಷ) ಅಕ್ರಮವಾಗಿ ಲಾಟರಿ ಮಾರಾಟ ಮಾಡುತಿದ್ದ ವೇಳೆ ಬಂಧಿತನಾದ ವ್ಯಕ್ತಿ.

ವಿರಾಜಪೇಟೆ ಆರ್ಜಿ ಗ್ರಾಮದ ಪೆರುಂಬಾಡಿ ಗ್ರಾಮದಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತಿದ್ದ ಎಂಬುದಾಗಿ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿರಾಜಪೇಟೆ ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ದಾಳಿ ನಡೆಸಿದರು. ವ್ಯಕ್ತಿಯಿಂದ 12 ಮೂಲ ಟಿಕೆಟ್, 50 ರೂ ಮುಖಬೆಲೆಯ 35 ಬಂಡಲ್ ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. 21,000 ರೂ ಮೌಲ್ಯ ಎಂದು ಅಂದಾಜಿಸಲಾಗಿದ್ದು.,ವಿರಾಜಪೇಟೆ ನಗರ ಠಾಣೆಯಲ್ಲಿ ಕೆ. ಮೋಹನ್ ಮೇಲೆ ಕರ್ನಾಟಕ ರಾಜ್ಯ ಲಾಟರಿ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು, ವಿರಾಜಪೇಟೆ ಉಪ ವಿಭಾಗ ಡಿ.ವೈ.ಎಸ್ಪಿ, ಮಾರ್ಗದರ್ಶನದಡಿಯಲ್ಲಿ, ವಿರಾಜಪೇಟೆ ವೃತ್ತ ನಿರೀಕ್ಷಕರು, ನಗರ ಠಾಣೆಯ ಠಾಣಾಧಿಕಾರಿ,ಎ.ಎಸ್.ಐ. ಮಂಜುನಾಥ್, ಅಪರಾಧ ದಳ ಸಿಬ್ಬಂದಿಗಳಾದ ಧರ್ಮ ಮತ್ತು ಶೇಖರ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0