ದೈವಿಕ ಬಳುವಳಿಯಾಗಿ ಬಂದ ಜ್ಯೋತಿಷ್ಯ ಶಾಸ್ತೃ ಕಲೆಯನ್ನು ಗೌರವಿಸಿ,ಉಳಿಸಿ: ಶ್ರೀ, ಶ್ರೀನಿವಾಸ ನರಸಿಂಹ ಗುರೂಜಿ; ಕಣಿಯರ್ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ದೈವಿಕ ಬಳುವಳಿಯಾಗಿ ಬಂದ ಜ್ಯೋತಿಷ್ಯ ಶಾಸ್ತೃ ಕಲೆಯನ್ನು ಗೌರವಿಸಿ,ಉಳಿಸಿ: ಶ್ರೀ, ಶ್ರೀನಿವಾಸ ನರಸಿಂಹ ಗುರೂಜಿ;  ಕಣಿಯರ್ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿರಾಜಪೇಟೆ:ಭಾರತವು ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಬಹು,ಸಂಸ್ಕೃತಿಗಳನ್ನು ಆಚರಿಸುತ್ತಾ ಪರೋಪಕಾರಿ ಕಾರ್ಯಗಳನ್ನು ನಿರ್ವಹಿಸುತ್ತಾ ಸರ್ವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣಗಳಿಂದ ನಾವು ಪ್ರಖ್ಯಾತರಾಗಿದ್ದೇವೆ. ನಮಗೆ ಬಳುವಳಿಯಾಗಿ ಬಂದಿರುವ ಕಲೆಯನ್ನು ಉಳಿಸಬೇಕು ಎಂದು ಮೇಲುಕೋಟೆಯ ಶ್ರೀ ಯತಿರಾಜದಾಸರು ಗುರುಪೀಠ ಗೃಹಸ್ಥ ಪೀಠಾಧಿಪತಿಗಳಾದ ಶ್ರೀ ಶ್ರೀ, ಶ್ರೀನಿವಾಸ ನರಸಿಂಹ ಗುರೂಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಬಿ.ಸಿ ರಂಗಪ್ಪ ವಿದ್ಯಾನಿಧಿ ಟ್ರಸ್ಟ್ (ರಿ) ಬೆಂಗಳೂರು, ಶ್ರೀ ಯತಿರಾಜದಾಸರ್ ಗುರುಪೀಠ ಮೇಲುಕೋಟೆ ಮಂಡ್ಯ ಜಿಲ್ಲೆ, ಮತ್ತು ಕೊಡಗು ಕಣಿಯರ ವಿದ್ಯಾಭಿವೃದ್ದಿ ಸಂಘ (ರಿ) ಕೊಡಗು ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಣಿಯರ ಜನಾಂಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ದೀಪ ಬೆಳಗಿಸಿ ಸಭಿಕರಿಗೆ ತಮ್ಮ ಆರ್ಶೀವಚನ ನೀಡುತ್ತಾ ಮಾತನಾಡಿದ ಗುರೂಜಿ ಅವರು, ಪೌರಾಣಿಕ ಹಿನ್ನಲೆ ದೈವಿಕ ಶಕ್ತಿ, ಪುರಾತನ ಕಾಲದ ನಮ್ಮ ಪೂರ್ವಜರಿಂದ ಬಂದ ಕಲೆಯು ಇಂದು ನಶಿಸಿ ಹೋಗುವ ಹಂತದಲ್ಲಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಕಣಿಯರು ಜನಾಂಗವು ನೆಲೆ ನಿಂತಿದ್ದರು ಆರ್ಥಿಕವಾಗಿ ಸಭಲತೆಯನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಶಾಸ್ತೃ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಕೊಡಗಿನ ಆರಾಧ್ಯ ದೈವವಾದ ಇಗ್ಗುತಪ್ಪ ದೇಗುಲದಲ್ಲಿ ಹುತ್ತರಿ ಮತ್ತು ಕೈಲ್ ಮುಹೂರ್ತದ ದಿನಾಂಕ ಮತ್ತು ಸಮಯ ನಿಗಧಿ ಮಾಡುವ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕಣಿಯರು ದೈವಸಂಭೂತರು ಎನಿಸಿಕೊಂಡಿದ್ದಾರೆ. ಇದು ಜನಾಂಗಕ್ಕೆ ದೊರತಿರುವ ಮನ್ನಣೆಯಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಗೌರವಯುತವಾದ ಬದುಕು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಅಯೋಜಿಸಲಾಗಿದೆ. ಮೇಲುಕೋಟೆ ಗುರುಪೀಠವು ಜನಾಂಗದ ಎಲ್ಲಾ ಬಾಂಧವರಿಗೆ ಸಕಲ ನೆರವು ನೀಡಲು ಸಿದ್ದವಾಗಿದೆ. ರಾಜ್ಯ ಸರ್ಕಾರವು ಇತರ ಜನಾಂಗಕ್ಕೆ ನೀಡುವ ಸೌಲಭ್ಯ ಮತ್ತು ಸವಲತ್ತುಗಳನ್ನು ನಮ್ಮ ಕಣಿಯರು ಜನಾಂಗಕ್ಕೂ ನೀಡುವಂತೆ ಈ ವೇದಿಕೆಯ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

 ಕೊಡಗು ಕಣಿಯರ ವಿದ್ಯಾಭಿವೃದ್ದಿ ಸಂಘದ ಕಾರ್ಯದರ್ಶಿಗಳಾದ ಕಣಿಯರ ಜೆ.ಪ್ರಕಾಶ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಕೊಡಗು ಜಿಲ್ಲೆಯಲ್ಲಿ ಕಣಿಯರ್ ಜನಾಂಗದ ಸಂಖ್ಯೆ ಬಹು ವಿರಳವಾಗಿದೆ. ಜನಾಂಗದ ಹಿರಿಯರು ಇತರ ಎಲ್ಲಾ ಜನಾಂಗದ ಕಷ್ಟಸುಖಗಳಲ್ಲಿ ಭಾಗಿಗಳಾಗಿ ಶಾಸ್ತೃದ ಮೂಲಕದ ಪರಿಹಾರ ಕಂಡುಕೊಳ್ಳುತಿದ್ದರು. ಜನಾಂಗದ ಹಲವು ಮಂದಿ ಸೇನೆಯಲ್ಲಿ, ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಗಳಲ್ಲಿ, ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೂ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಸ್ಥಾನಮಾನ ಕಣಿಯರಿಗೆ ಲಭಿಸಿರುವುದು ಧನ್ಯ ಎಂದು ಭಾವಿಸಿದ್ದೇವೆ. ಜನಾಂಗದ ಅಭಿವೃದ್ದಿಗೆ ಎಲ್ಲಾ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಣಿಯರ್ ಜನಾಂಗದ ಗ್ರಾಮೀಣಾ ಭಾಗದ ಎಸ್.ಎಸ್.ಎಲ್.ಸಿ. ಪಿ.ಯು.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ, ನಗದು, ಪರಿತೋಷಕ ನೀಡಿ ಸನ್ಮಾನಿಸಲಾಯಿತು. ಕೊಡಗಿನಲ್ಲಿ ಕಣಿಯರು ಜ್ಯೋತಿಷ್ಯ ಸಮುದಾಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾಜ ಸೇವೆಯಲ್ಲಿ ಸಿ. ಸಂಜಯ್ ಕುಮಾರ್, ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಆರ್. ಪುರುಷೋತ್ತಮ, ನೃತ್ಯ ಕ್ಷೇತ್ರದಲ್ಲಿ ವಿದ್ವಾನ್ ಯೋಗೇಶ್ ಕುಮಾರ್ ಎಸ್, ವೈಧ್ಯಕೀಯ ಕ್ಷೇತ್ರದಲ್ಲಿ ಡಾ.ಗಿರೀಶ್‌ಚಂದ್ರ, ಕಿರುತೆರೆಯ ಕಲಾವಿದರಾದ ಕಡುವಚೇರಿರ ಉಮೇಶ್, ನಿವೃತ್ತ ಸೈನಿಕರಾದ ಚೋಂಡೆಪಂಡ ಶಂಬು ಪೂಣಚ್ಚ, ಜ್ಯೋತಿಷ್ಯ ಕ್ಷೇತ್ರದಲ್ಲಿ ಪಂ. ಶ್ರೀಮತಿ ನಾಗರತ್ನ ಆರ್, ಡಾ. ರವಿಕುಮಾರ್ ಬೆಂಗಳೂರು, ಶಶಿಕುಮಾರ್ ಪಂಡಿತ್ ಸುಳ್ಯ, ಪಂಡಿತ್ ಶಿಜು ಗುರುಕಳ್ ವಿರಾಜಪೇಟೆ, ಪ್ರಭಾಕರ್ ಪಂಡಿತ್ ಉಳ್ಳಾಲ ಮಂಗಳೂರು ಗಣ್ಯರ ಸಮ್ಮುಖದಲ್ಲಿ ಫಲತಾಂಬುಲ ನೀಡಿ ಸನ್ಮಾನಿಸಲಾಯಿತು.ಜನಾಂಗದ ಬಾಂಧವರಿಂದ ವಿವಿಧ ಸಂಸ್ಕಾತಿಕ ಕಾರ್ಯಕ್ರಮ ನಡೆಯಿತು.

ಕೊಡಗು ಕಣಿಯರ ವಿಧ್ಯಾಭಿವೃದ್ದಿ ಸಂಘ ಕೊಡಗು ಅದ್ಯಕ್ಷರಾದ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಕಣಿಯರ ಜನಾಂಗ ಬಾಂಧವರು ಅಲ್ಪ ಪ್ರಮಾಣದಲ್ಲಿದ್ದು. ಇವರ ಸಾಧನೆಗಳು ಅಪಾರ. ಕೊಡಗು ಜಿಲ್ಲೆಯು ಕೃಷಿ ಪ್ರಧಾನವಾದರು ಜನಾಂಗದ ಹಲವು ಕೃಷಿಯನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತಿದ್ದು ಸೇನೆಯಲ್ಲಿ ಕ್ರೀಡೆಯಲ್ಲಿ ತಮ್ಮ ಅಳಿಲು ಸೇವೆಯನ್ನು ನೀಡಿದ್ದಾರೆ. ಕಣಿಯರ ಜನಾಂಗದ ಕುಲ ಕಸುಬುಗಳನ್ನು ಮರೆತು ಸಾಗಬಾರದು. ಆಳಿವಿನಂಚಿನಲ್ಲಿರುವ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟನಲ್ಲಿ ಸರ್ವರು ಪ್ರಯತ್ನ ಪಡಬೇಕು ಎಂದರು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಸಂಜಯ್ ಕುಮಾರ್, ಲ್ಯಾಂಡ್ ಡೇವಲಪರ್ ಬೆಂಗಳೂರು, ನಿವೃತ್ತ ಡಿ.ಜಿ.ಎಂ. ಬಿ.ಇ.ಎಲ್ ಬೆಂಗಳೂರು ಲೋಲಕೃಷ್ಣ, ಕಣಿಯರ ಸೇವಾ ಸಮಾಜ ಬೆಂಗಳೂರು ಅದ್ಯಕ್ಷರಾದ ಆರ್. ಪ್ರಸನ್ನ ಕುಮಾರ್, ಕಣಿಯರ ವಿದ್ಯಾಭಿವೃದ್ದಿ ಸಂಘ ಕೊಡಗು ಸಂಸ್ಥಾಪಕ ಅಧ್ಯಕ್ಷರಾದ ಕೆ.ಎನ್ ನಾಣಯ್ಯ, ಮತ್ತು ಕಣಿಯರ ವಿದ್ಯಾಭಿವೃದ್ದಿ ಸಂಘ ಕೊಡಗು ಕಾರ್ಯದರ್ಶಿಗಳಾದ ಕಣಿಯರ ಜೆ ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು. ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ಬೆಂಗಳೂರು. ಸಂಸ್ಥಾಪಕರಾದ ಆರ್. ರಂಗಸ್ವಾಮಿ, ಎನ್. ಕೃಷ್ಣಮೂರ್ತಿ, ಬಾಲಚಂದ್ರ ಆರ್, ಲಕ್ಷಣ ಸಿ ಕಣಿಯರ್, ಸೇರಿದಂತೆ, ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ ಕಣಿಯರ ಸೇವಾ ಸಂಘದ ಪದಾಧಿಕಾರಿಗಳು, ಜನಾಂಗ ಬಾಂದವರು, ಕೊಡಗು ಜಿಲ್ಲಾ ಕಣಿಯರ ಜನಾಂಗದ ಮುಖಂಡರು ಮತ್ತು ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ