ಎಲ್ಲರ ಮನೆಯ ಮಗನಾಗಿ ನಾನು ಸೇವೆ ಮಾಡಲು ಸದಾ ಬದ್ಧ: ಯದುವೀರ್‌ ಒಡೆಯರ್‌: ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ 3500 ಪೌರ ಕಾರ್ಮಿಕರಿಗೆ ದಿನಸಿ, 50 ಸಾವಿರ ಮಂದಿಗೆ ಅನ್ನ ಸಂತರ್ಪಣೆ

Jun 4, 2025 - 21:53
Jun 5, 2025 - 01:11
 0  38
ಎಲ್ಲರ ಮನೆಯ ಮಗನಾಗಿ ನಾನು ಸೇವೆ ಮಾಡಲು ಸದಾ ಬದ್ಧ: ಯದುವೀರ್‌ ಒಡೆಯರ್‌:  ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ 3500 ಪೌರ ಕಾರ್ಮಿಕರಿಗೆ ದಿನಸಿ, 50 ಸಾವಿರ ಮಂದಿಗೆ ಅನ್ನ ಸಂತರ್ಪಣೆ
ಎಲ್ಲರ ಮನೆಯ ಮಗನಾಗಿ ನಾನು ಸೇವೆ ಮಾಡಲು ಸದಾ ಬದ್ಧ: ಯದುವೀರ್‌ ಒಡೆಯರ್‌:  ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ 3500 ಪೌರ ಕಾರ್ಮಿಕರಿಗೆ ದಿನಸಿ, 50 ಸಾವಿರ ಮಂದಿಗೆ ಅನ್ನ ಸಂತರ್ಪಣೆ

ಮೈಸೂರು: ನಮ್ಮ ಮೈಸೂರು ಸಂಸ್ಥಾನದ ಅರಸರೆಲ್ಲರೂ ಜನಸೇವೆ ಮಾಡಿಯೇ ಜನಮನ ಗೆದ್ದವರು. ನಾನು ನಿಮ್ಮೆಲ್ಲರ ಮನೆ ಮಗನಾಗಿ ಸೇವೆ ಮಾಡಲು ಸದಾ ಬದ್ಧನಾಗಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಕರ್ನಾಟಕದ ಸುಧಾರಣೆಯ ಹರಿಕಾರರು, ಶಿಕ್ಷಣ ತಜ್ಞರು, ಸಂಗೀತ ಆರಾಧಕರು, ಅನ್ನದಾತರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮಜಯಂತಿ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೈಸೂರು ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ 3500 ಪೌರ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮಜಯಂತಿ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ಐವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಲಾಯಿತು.ಇದು ಯಾವುದೇ ಪಕ್ಷದ ಕಾರ್ಯಕ್ರಮವಾಗಿರಲಿಲ್ಲ, ನಾಲ್ವಡಿ ಅಭಿಮಾನಿಗಳು ಆಯೋಜಿಸಿದ್ದ ಆತ್ಮೀಯ ಕಾರ್ಯಕ್ರಮವಾಗಿತ್ತು. 

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ನಮಗೆಲ್ಲ ದಿನಸಿ ಕಿಟ್‌ಗಳನ್ನು ನೀಡಿದ ಸಂಸದರಾದ ಯದುವೀರ್‌ ಒಡೆಯರ್‌ ಅವರ ಕಾರ್ಯ ಮೆಚ್ಚುವಂಥದ್ದು. ಇಂಥ ಕಾರ್ಯಕ್ರಮವನ್ನು ಇದುವರೆಗೆ ನೋಡೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ಇಷ್ಟು ಆತ್ಮೀಯವಾಗಿ ಯಾರೂ ನೋಡಿಕೊಂಡಿರಲ್ಲ. ರಾಜರು ತಮ್ಮ ರಾಜಮನೆತನದಂತೆ ನಮ್ಮನ್ನು ನೋಡಿಕೊಂಡಿದ್ದಾರೆ. ನಮಗೆ ನೆರವು ನೀಡಿದ್ದಾರೆ ಎಂದು ಪೌರ ಕಾರ್ಮಿಕರು ಸಂಸದ ಯದುವೀರ್‌ ಒಡೆಯರ್‌ ಅವರನ್ನು ಹೊಗಳಿದರು.

ಸಂಸದ ಯದುವೀರ್‌ ಒಡೆಯರ್‌ ಅವರು ಈರ ರೀತಿಯ ಕಾರ್ಯಕ್ರಮಗಳನ್ನು ನಿರಂತವಾಗಿ ಆಯೋಜಿಸುತ್ತಿರಲಿ. ಅವರು ಇನ್ನಷ್ಟು ಉನ್ನತ ಎತ್ತರಕ್ಕೆ ಏರುತ್ತಿರಲಿ ಎಂದು ಪೌರ ಕಾರ್ಮಿಕರು ಆಶಯ ವ್ಯಕ್ತಪಡಿಸಿದರು.ಸಾವಿರಾರು ಮಂದಿಗೆ ಅನ್ನದಾನ ಮಾಡಲು ನೂರಾರು ಮಂದಿ ಆಯೋಜಕರಾಗಿ ಕೆಲಸ ಮಾಡಿದರು. ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.

ಎಲ್ಲರಿಗೂ ಮನದುಂಬಿ ವಂದಿಸುವೆ: ಯದುವೀರ್‌

ನಮ್ಮ ರಾಜರ್ಷಿಗಳಾದ ಕೃಷ್ಣರಾಜ ಒಡೆಯರ್‌ ಜನ್ಮಜಯಂತಿ ಮತ್ತು ನಾನು ಸಂಸದನಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಮನದುಂಬಿ ವಂದಿಸುವೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಒಂದು ವರ್ಷದಲ್ಲಿ ಸಂಸದನಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಆದರೆ ಈ ಕಾರ್ಯಕ್ರಮ ನಿಜಕ್ಕೂ ನನಗೆ ಅತ್ಯಂತ ಆಪ್ತ ಎನಿಸಿತು. ಇಂಥ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಆಯೋಜಿಸುತ್ತೇನೆ ಎಂದು ತಿಳಿಸಿದರು.

ಪೌರ ಕಾರ್ಮಿಕರು ತೃಪ್ತಿಪಟ್ಟಿದ್ದಾರೆ. ಅವರಿಗೆ ಸಮಾಧಾನವಾಗಿದೆ. ನಮ್ಮ ನಗರವನ್ನು ಚೆಂದಗೊಳಿಸುವವರ ಬಾಳನ್ನು ಇನ್ನಷ್ಟು ಚೆಂದ ಮಾಡಲು ಯೋಜನೆ ರೂಪಿಸುತ್ತೇನೆ ಸಂಸದರು ತಿಳಿಸಿದರು.

ಜನಪರ ಕಾರ್ಯಕ್ರಮಗಳನ್ನು, ಜನೋಪಯೋಗಿ ಯೋಜನೆಗಳನ್ನು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳುತ್ತೇನೆ. ನಮ್ಮ ಕ್ಷೇತ್ರ ಇಡೀ ದೇಶದಲ್ಲಿ ಮಾದರಿ ಕ್ಷೇತ್ರವಾಗಿರುವಂತೆ ನೋಡಿಕೊಳ್ಳುತ್ತೇನೆ ಎಂದು ಯದುವೀರ್‌ ಒಡೆಯರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0