ಗೋಣಿಕೊಪ್ಪ: ಪರಿಸರ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಗಿಡಗಳ ವಿತರಣೆ

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಸಹಯೋಗದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ಪರಿಸರದ ಅರಿವು ಮೂಡಿಸುವಲ್ಲಿ ಮುಖ್ಯ ಅತಿಥಿಗಳಾದ ಡಾ. ಚಂದ್ರಶೇಖರ್ ಮಾತನಾಡಿ ಮನುಷ್ಯನಿಗೆ ಆಮ್ಲಜನಕ ಮುಖ್ಯವಾಗಿರುವ ಕಾರಣ ಪರಿಸರದಲ್ಲಿ ಗಿಡ ಮರಗಳು ಅತ್ಯವಶ್ಯವಾಗಿರುತದೆ.ಗಿಡಕಡಿಯುವುದು ಹೆಚ್ಚಾಗಿದೆ ಹೊರತು ಗಿಡನಡುವುದು ಕಡಿಮೆ ಯಾಗಿದೆ. ಎಲ್ಲೆಡೆ ವಾಣಿಜ್ಯ ಸಂಕಿರ್ಣಗಳು ತಲೆ ಎತ್ತುತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ತಾ. ಕಾ. ಪ. ಸಂಘದ ಅಧ್ಯಕ್ಷರಾದ ಕಿಶೋರ್ ನಾಚಪ್ಪ ವಹಿಸಿಕೊಂಡಿದ್ದರು. ಮುಳಿಯ ಗೋಲ್ಡ್ ಅಂಡ್ ಡೈಮೊಂಡ್ ನ ವ್ಯವಸ್ಥಾಪಕರಾದ ಕಿಶೋರ್, ಎನ್ ಎನ್ ದಿನೇಶ್, ಜೋಡುಬೀಟಿ ಜಗದೀಶ್, ಸಿಂಗಿ ಸತೀಶ್, ಶ್ರೀನಿವಾಸ್, ಸುಬ್ಬಯ್ಯ, ನೂರೇರ ರಂಜಿ ಮತ್ತಿರರು ಉಪಸ್ಥಿತರಿದ್ದರು..
What's Your Reaction?






