ಸಂಕಷ್ಟದಲ್ಲಿದ್ದ ಕಾಫಿ ಬೆಳೆಗಾರರ ಕೈ ಹಿಡಿದ ತೀತರಮಾಡ ತಿಮ್ಮಯ್ಯ ಪ್ರಭು: ವಯನಾಡು ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯಿ ಸಮಿತಿಯಿಂದ ಗೌರವ

Jun 9, 2025 - 13:07
Jun 9, 2025 - 13:08
 0  356
ಸಂಕಷ್ಟದಲ್ಲಿದ್ದ ಕಾಫಿ ಬೆಳೆಗಾರರ ಕೈ ಹಿಡಿದ ತೀತರಮಾಡ ತಿಮ್ಮಯ್ಯ ಪ್ರಭು:   ವಯನಾಡು ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯಿ ಸಮಿತಿಯಿಂದ ಗೌರವ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಮಿಡಿಯುತ್ತಿರುವ ಟಿಟಿಪಿ ಗ್ರೂಪ್ ಮಾಲೀಕ ತೀತರಮಾಡ ತಿಮ್ಮಯ್ಯ ಪ್ರಭು ಅವರಿಗೆ ವಯನಾಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರರು ಒಂದಲ್ಲಾ‌ ಒಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಕಾಫಿ ಕೊಯ್ಲು ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಅಕಾಲಿಕ ಮಳೆಯಿಂದಾಗಿ ಕಾಫಿ ಒಣಗಿಸಲು ಸಾಧ್ಯವಿಲ್ಲದೆ ಮಧ್ಯಮ ವರ್ಗದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕೊಳ್ಳುತ್ತಿದ್ದಾರೆ.ಇದನ್ನ ಮನಗಂಡು ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆ ದರಕ್ಕೆ ಟಿಟಿಪಿ ಗ್ರೂಪ್ ಮಾಲೀಕ ತೀತರಮಾಡ ತಿಮ್ಮಯ್ಯ ಪ್ರಭು ಅವರು ಹಸಿ ಕಾಫಿಯನ್ನು ಖರೀದಿಸಿ ಕೊಡಗಿನ ಮಧ್ಯಮ ವರ್ಗದ ಕಾಫಿ ಬೆಳೆಗಾರರ ಪಾಲಿನ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ವಯನಾಡು ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಧ್ಯಮ ವರ್ಗದ ಕಾಫಿ ಬೆಳೆಗಾರರು ಕಾಫಿ ಒಣಗಿಸಲು ಸಂಕಷ್ಟ ಪಡುತ್ತಿದ್ದರು.ಇದನ್ನ ಮನಗಂಡು ತೀತರಮಾಡ ತಿಮ್ಮಯ್ಯ ಪ್ರಭು ಅವರು ವಯನಾಡು ಜಿಲ್ಲೆಯ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಮಿಡಿದಿದ್ದಾರೆ.ವಯನಾಡು ಜಿಲ್ಲೆಯ ಕಾಫಿ ಬೆಳೆಗಾರರಿಂದ ಸೂಕ್ತ ಮಾರುಕಟ್ಟೆ ಬೆಲೆ ನೀಡಿ ಹಸಿ‌ಕಾಫಿ ಖರೀದಿಸಿ ಬೆಂಬಲವಾಗಿ ನಿಂತಿದ್ದಾರೆ.ವಯನಾಡು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಸಿ ಕಾಫಿ ಖರೀದಿಸಿ ವಯನಾಡು ಜಿಲ್ಲೆಯ ಕಾಫಿ ಬೆಳವಣಿಗೆಗೆ ಉತ್ತೇಜ ನೀಡಿದ ತೀತರಮಾಡ ತಿಮ್ಮಯ್ಯ ಪ್ರಭು ಅವರಿಗೆ ವಯನಾಡು ಜಿಲ್ಲಾ ಪಂಚಾಯತ್ ಪ್ರಶಸ್ತಿ ನೀಡಿ ಗೌರವಿಸಿದೆ.

What's Your Reaction?

Like Like 3
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1