ಸಂಪತ್ ನಾಪತ್ತೆ ಪ್ರಕರಣ: ಆರು ದಿನಗಳ ಬಳಿಕ ಶವವಾಗಿ ಪತ್ತೆ!!

ಮಡಿಕೇರಿ:ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ಸಿವಾಸಿ,ಪ್ರಸ್ತುತ ಕುಶಾಲನಗರದಲ್ಲಿ ನೆಲೆಸಿರುವ ಗುತ್ತಿಗೆದಾರ ಸಂಪತ್(ಶಂಭು) ಗಾಗಿ ತೀವ್ರ ಕಾರ್ಯಾಚರಣೆಕೊಡಗು ಮತ್ತು ಹಾಸನ ಪೊಲೀಸರು ಹುಡುಕಾಟ ನಡೆಸಿ, ಕೊನೆಗೂ ಮೃತ ದೇಹ ಪತ್ತೆಯಾಗಿದೆ.ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಬಾಗೇರಿಯ ಸಮೀಪ ಕಲ್ಲಹಳ್ಳಿ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ಅವರ ಮೃತ ದೇಹ ಪತ್ತೆ ಆಗಿದೆ.ಆರು ದಿನಗಳ ನಂತರ ಸಂಪತ್ ಅವರ ಮೃತದೇಹದ ಪತ್ತೆಯಾಗಿದ್ದು,ಪ್ರಕರಣ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
What's Your Reaction?






