ಕುಶಾಲನಗರ: ಕುಂಡೆ-ಬೇಡ ಹಬ್ಬ, ಬಲವಂತವಾಗಿ ಹಣ ವಸೂಲಿ
ಕುಶಾಲನಗರ:ಕೊಡಗು ಜಿಲ್ಲೆಯಲ್ಲಿ ಮೇ21 ಮತ್ತು 22 ರಂದು ಕುಂಡೆ-ಬೇಡು ಹಬ್ಬ ಆಚರಿಸಲಾಗುತ್ತಿದೆ.ಬಲವಂತವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಕುಂಡೆ ಹಬ್ಬದಲ್ಲಿ ಮಾಮೂಲಿಯಾಗಿ ಬಿಟ್ಟಿದೆ.ಈ ಹಿನ್ನೆಲೆ ಜಿಲ್ಲಾ ಪೊಲೀಸರ ಇಲಾಖೆ ಕಟ್ಟುನಿಟ್ಟಾದ ಆದೇಶ ನೀಡಿದರು ಕೂಡ ಕುಂಡೆ ಹಬ್ಬದಲ್ಲಿ ಬಲವಂತವಾಗಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಕುಂಡೆ-ಬೇಡು ಹಬ್ಬ ಹಿನ್ನೆಲೆ ಕುಶಾಲನಗರದಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.ರಸ್ತೆಯಲ್ಲಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವುದರಿಂದ ಕುಶಾಲನಗರ ಬೈಚನಹಳ್ಳಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ಸರತಿಸಾಲಿನಲ್ಲಿ ವಾಹನಗಳು ನಿಂತಿದೆ.ಪೊಲೀಸ್ ಇಲಾಖೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
What's Your Reaction?
Like
1
Dislike
0
Love
1
Funny
0
Angry
1
Sad
1
Wow
0

