ಸಂಪಾಜೆ:ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಸೂಚನೆ

ಸಂಪಾಜೆ:ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಸೂಚನೆ

ಸಂಪಾಜೆ(COORGDAILY): ಸಂಪಾಜೆ ಶಾಖಾಧಿಕಾರಿಗಳ ಕಚೇರಿ ಕಾರ್ಯ ಮತ್ತು ಪಾಲನೆ ಶಾಖೆ ಸಂಪಾಜೆ ಕಛೇರಿಗೆ ಶಾಸಕರಾದ ಎ ಎಸ್ ಪೊನ್ನಣ್ಣ ರವರ ಕಾರ್ಯದರ್ಶಿ ಗಳಾದ ರಾಮಚಂದ್ರ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳಾದ ಮುತ್ತಣ್ಣ ರವರು ಭೇಟಿ ನೀಡಿ JE ಅನಿಲ್ ರವರಿಂದ ಮಾಹಿತಿ ಪಡೆದರು. ಅಧಿಕಾರಿಗಳಿಗೆ ಹೆಚ್ಚಿನ ಸಿಬ್ಬಂದಿಗಳು ಮತ್ತು ಇಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಸರಿ ಪಡಿಸುವಂತೆ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಚೆಸ್ಕಾಂ ನಾಮ ನಿರ್ದೇಶಿತ ಸದಸ್ಯರುಗಳಾದ ರಿತಿನ್ ಡೆಮ್ಮಲೇ, ಭಾರತಿ, ಪದ್ಮನಾಭ ಮಂಗಳಪಾರೆ, ಸಾವಿತ್ರಿ,ವಲಯ ಅಧ್ಯಕ್ಷರುಗಳಾದ ರವಿರಾಜ್ ಹೊಸುರು, ಜಯರಾಮ ಪೆರುಮುಂಡ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಹನೀಫ್ ಎಸ್ ಪಿ, ವಿಜಯ ಕುಮಾರ್ ಕನ್ಯಾನ, ಮೋಹನ ಬಾಳೆಕಜೆ, ಸುಂದರ ಚೆಡಾವು,ತಿರುಮಲ ಸೋನಾ, ರುನೈಝ್ NSUI, ಇನ್ನಿತರರು ಉಪಸ್ಥಿತರಿದ್ದರು.