ಆನೆಕಾಡು ಬಳಿ ಬೈಕ್-ಲಾರಿ ನಡುವೆ ಅಪಘಾತ
ಕುಶಾಲನಗರ; ಆನೆಕಾಡು ಬಳಿ ಬೈಕ್-ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಂಬಿಬಾಣೆ ದಿನೇಶ್ (42) ಗಾಯಾಳು ಬೈಕ್ ಚಾಲಕ. ಕುಶಾಲನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
