ಶನಿವಾರಸಂತೆ ಶ್ರೀ ನಾರಾಯಣ ಗುರು ಧರ್ಮ ಪಾಲನ ಯೊಗಂ ಶಾಖೆಗೆ ಅತ್ಯುತ್ತಮ ಶಾಖೆ ಪ್ರಶಸ್ತಿ
ಶನಿವಾರಸಂತೆ: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೊಗಂ ಕೊಡಗು ಯೂನಿಯನ್ ಸಿದ್ದಾಪುರ ಇವರ ವತಿಯಿಂದ ಇತ್ತೀಚೆಗೆ ಸಿದ್ದಾಪುರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸಮಾರಂಭದಲ್ಲಿ ಶನಿವಾರಸಂತೆ ಶ್ರೀ ನಾರಾಯಣ ಗುರು ಧರ್ಮ ಪಾಲನ ಯೊಗಂ ಶಾಖೆಗೆ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೊಗಂ ಕೊಡಗು ಯೂನಿಯನ್ ಸಿದ್ದಾಪುರ ಇವರು ಜಿಲ್ಲೆಯಲ್ಲಿನ ಅತ್ಯುತ್ತಮ ಶಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ವಿರಾಜಪೇಟೆ ಆರಾಮೇರಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ , ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ. ಕೆ ಲೋಕೇಶ್, ಪ್ರಮುಖರಾದ ವಿ. ಎಂ ವಿಜಯ್, ಹರಪ್ಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ, ಶನಿವಾರಸಂತೆ ಶ್ರೀ ನಾರಾಯಣ ಧರ್ಮ ಪಾಲನ ಯೊಗಂ (ಎಸ ಎನ್ ಡಿ ಪಿ ) ಶಾಖೆಯ ಸ್ಥಾಪಕ ಪಿ. ಕೆ ಗಂಗಾಧರ್, ಅಧ್ಯಕ್ಷ ರವಿಕುಮಾರ್,ಉಪಾಧ್ಯಕ್ಷ ಪ್ರಥ್ವಿ,ಕಾರ್ಯದರ್ಶಿ ಪ್ರಶಾಂತ್, ಸದಸ್ಯರಾದ ಸುಕುಮಾರ್, ಕುಮಾರ್,ನಿಶಿತ್, ಪ್ರದೀಪ್,ಕಲೋಶ್, ಸುರೇಶ್, ರಾಜು,ವಿನೋದ್, ನಂದಾಕಿಶೋರ್,ಪ್ರಮಿ, ವಿಜಯ್, ಅಜಿತ್,ಅನಿಶ್, ಲೋಕೇಶ್ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
