ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಮುಂದುಮನೆ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ

Jun 2, 2026 - 19:15
 0  271
ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಮುಂದುಮನೆ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ

ಮಡಿಕೇರಿ, ಜೂ.02:-ಮನ-ಮನೆಯಲ್ಲಿ ಸರಸ್ವತಿ ನೆಲೆಸಿದರೆ ಲಕ್ಷ್ಮಿ ತನಿಷ್ಟಕ್ಕೆ ಒಲಿಯುವಳು. ಲಕ್ಷ್ಮಿ ಖಾಲಿಯಾದರೂ ಸರಸ್ವತಿ ಸಂಪನ್ನಳು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ದೃಢವಾದ ನುಡಿಗಳನ್ನಾಡಿದರು. 

 ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಮುಂದುಮನೆಯಲ್ಲಿ ನಡೆದ ಕೊಡವ ಪುಸ್ತಕ ಪತ್ತಾಯದ 11 ನೇ ಆವೃತ್ತಿಯನ್ನು ತೆರೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಚಯ್ಯ, ನಮ್ಮ ಬದುಕಿನಲ್ಲಿ ಓದಿ, ಕೇಳಿ, ತಿಳಿದು ಕಲಿತದ್ದು ಎಂದಿಗೂ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ. ಇದರೊಂದಿಗೆ ಪುಸ್ತಕಗಳಲ್ಲಿ ಅಡಗಿರುವ ಅಗಾದವಾದ ಜ್ಞಾನ ಎಂದಿಗೂ ಮಾಸುವುದಿಲ್ಲ. ಆದ್ದರಿಂದ ಪುಸ್ತಕದ ಜ್ಞಾನ ಎಂಬುವುದು ಒಳ್ಳೆಯ ಸಂಸ್ಕಾರ-ಸಂಸ್ಕøತಿಗೆ ದಾರಿ ತೋರಿಸಬಲ್ಲದು. ಕೊಡವರ ವಿಶೇಷ ಸಂಸ್ಕøತಿ ಇಡೀ ಜನಾಂಗದ ಹೆಸರನ್ನು ಎತ್ತಿ ಹಿಡಿಯಲು ಕಾರಣವಾಗಿದೆ. ಹೀಗಿರುವಾಗ ದಿನಕ್ಕೆ ಅರ್ಧ ಗಂಟೆಗಳ ಸಮಯವಾದರೂ ಮೊಬೈಲನ್ನು ದೂರವಿಟ್ಟು ಪುಸ್ತಕ ಓದುವ ಸಂಸ್ಕøತಿ ಬೆಳೆಸಿಕೊಳ್ಳುವುದು ಉತ್ತಮ ಎಂದರು.

 ಮುಂದುವರಿದು ಮಾತನಾಡಿದ ಅವರು, ಪಾಲಂದಿರ ಕುಟುಂಬದ ಹಿನ್ನಲೆ, ಹಿರಿಯರ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ನೀಡಿರುವ ಸೇವೆ ಸ್ಮರಿಸಿದರು. 

 ಪುಸ್ತಕ ಪತ್ತಾಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ ಪೊನ್ನಣ್ಣ ಅವರು ಕೊಡವರ ಪ್ರತಿಯೊಂದು ಆಭರಣಗಳಿಗೆ, ಹಬ್ಬ-ಆಚರಣೆಗಳಿಗೆ, ಪದ್ಧತಿ-ಪರಂಪರೆಗೆ, ಹಾಕಿ ಉತ್ಸವಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆಯೊಂದಿಗೆ ಸಾಂಸ್ಕøತಿಕವಾದ ಗಾಂಭೀರ್ಯವಿದೆ. ಇವೆಲ್ಲವನ್ನು ಜನಾಂಗ ಭಾಂದವರು ಹೆಮ್ಮೆಯಿಂದ ಧರಿಸುವಂತಾಗಬೇಕು, ನಡೆಸಿಕೊಂಡು ಮುನ್ನಡೆಯಬೇಕು. ಅಂತದಲ್ಲಿ ಮಾತ್ರ ನಮ್ಮ ಹಿರಿಯರು ತಂದುಕೊಟ್ಟ ಸಂಸ್ಕøತಿ ಮುಂದಿನ ಪೀಳಿಗೆಗೆ ಅದೇ ರೀತಿಯ ಘನತೆ-ಗಾಂಭಿರ್ಯದೊಂದಿಗೆ ಹಸ್ತಾಂತರಿಸಲು ಸಾಧ್ಯ ಎಂದರು. 

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಬಲ್ಯಮನೆ, ಮುಂದ್‍ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವಂತಹ ಅಕಾಡೆಮಿಯ ಯೋಜನೆಯು ಸಮಾಜದಲ್ಲಿ ಸಾಹಿತ್ಯ-ಸಂಸ್ಕøತಿಯನ್ನು ಬೆಳೆಸುವಲ್ಲಿ ಅನುಕೂಲದಾಯಕವಾಗಿದೆ. ಎಲ್ಲಾ ಕುಟುಂಬಗಳು ಇಂತಹ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು. 

 ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಪರಂಪರೆ ಮುಂದಿನ ಪೀಳಿಗೆಗೆ ಪಾರಂಪರ್ಯಗೊಳಿಸುವಲ್ಲಿ ಹಾಗೂ ಸಾಮಾಜಿಕ-ಸಾಂಸ್ಕøತಿಕ ಬದ್ಧತೆಯನ್ನು ಮುನ್ನಡೆಸಲು ಕೊಡವ ಭಾಷೆ-ಸಂಸ್ಕøತಿ ಪಾಲಿಸಿಕೊಂಡು ಬರುತ್ತಿರುವ ಎಲ್ಲಾ ಜನಾಂಗಗಳು ಜವಾಬ್ದಾರಿಯುತವಾಗಿ ಒಗ್ಗಟ್ಟಿನ ಹೆಜ್ಜೆ ಇಡಬೇಕೆಂದರು.

 ಈ ಸಂದರ್ಭದಲ್ಲಿ ಪಾಲಂದಿರ ಒಕ್ಕ ಪಟ್ಟೆದಾರ 96 ಹರೆಯದ ಪಾಲಂದಿರ ಸೋಮಣ್ಣ ತಮ್ಮ ಅನುಭವದ ನುಡಿಗಳನ್ನಾಡಿದರು. ‘ಪಾಲಂದಿರ’ ಹೆಸರು ಕಾವೇರಿ ತಾಯಿ ಬಲಂಬೇರಿ ಮೂಲಕ ಹರಿಯುವುದಕ್ಕಿಂತ ಮುಂಚೆ ಇದ್ದರೂ, ಆ ಪರ್ವಕಾಲದಲ್ಲಿ ಕಾವೇರಿಯ ದರುಶನದ ಭಾಗ್ಯಪಡೆದ ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ಹಾಲು ಕುಡಿದು ಸಂಭ್ರಮಿಸುವ ಸಲುವಾಗಿ ‘ಪಾಲ್ ಏಂದಿರ’ ಎಂಬ ದೈವವಾಣಿ ಕೇಳಿ ಬಂದ ಮೇರೆಗೆ ಕ್ರಮೇಣ ಇದೇ ಮನೆತನದ ಹೆಸರನ್ನು ಪಡೆದುಕೊಳ್ಳುತ್ತದೆ-ಪಾಲಂದಿರ ಎಂದು ವ್ಯಾಖ್ಯಾನಿಸಿದರು.

 ಕಾರ್ಯಕ್ರಮದಲ್ಲಿ ಕುಟುಂಬದ ಬಾಳೋಪಾಟ್ ನುರಿತರಾದ ಪಾಲಂದಿರ ಮೊಣ್ಣಪ್ಪ, ಬೊಳಕಾಟ್ ತರಬೇತುದಾರರಾದ ಪಾಲಂದಿರ ರವಿ ಮಂದಣ್ಣರನ್ನು ಮುಖ್ಯ ಅತಿಥಿಗಳಿಂದ ಸನ್ಮಾನಿಸಲಾಯಿತು. ಕೋಟೆರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು.

 ಕಾರ್ಯಕ್ರಮದ ಮೊದಲು ಪಾಲಂದಿರ ಪ್ರಜ್ಞಾ ದರ್ಶನ್ ಕಾವೇರಿ ತಾಯಿಯನ್ನು ಸ್ತುತಿಸಿ ಪ್ರಾರ್ಥಿಸಿದರು. ಬಲಂಬೇರಿ ಗ್ರಾಮದ ಬೊಳ್ಳಚೆಟ್ಟಿರ ವಿಜಯ ಸಂಗಡಿಗರು ಕೆಲಹೊತ್ತು ಕಾವೇರಿ ಪುರಾಣವನ್ನು ಬಾಳೋಪಾಟ್ ಮೂಲಕ ಹಾಡಿದರು. 

 ಕಾರ್ಯಕ್ರಮದ ರುವಾರಿ ಪಾಲಂದಿರ ಜಗಜೋಯಪ್ಪ ಸ್ವಾಗತಿಸಿ, ನಿರೂಪಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ವಂದಿಸಿದರು. ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ, ಪಾಲಂದಿರ ಕುಟುಂಬದಲ್ಲಿ ಹುಟ್ಟಿ ಬೆಳೆದು ವಿದ್ಯಾವಂತರಾದ ಕೇಟೋಳಿರ ಕುಟ್ಟಪ್ಪ ರಾಜಪ್ಪ ವಿದೇಶದಲ್ಲಿರುವ ಪಾಲಂದಿರ ಕುಟುಂಬದ ತಾಮನೆ ಹುಡುಗಿಯರ ಸಂಸಾರ, ಊರು-ನಾಡಿನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0