ಫಿಜಿಯೋಥೆರಪಿಸ್ಟ್ ಆಗಿ ಡಾ. ಚೆಕ್ಕೆರ ಪೂವಯ್ಯ ಆಯ್ಕೆ
ಮಡಿಕೇರಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ ಎಸ್ ಸಿ ಎ) ಆಯೋಜಿಸಿರುವ ಮಹಾರಾಜ ಟ್ರೋಪಿ ಟಿ20 ಟೂರ್ನಮೆಂಟ್ ನಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡದ ಮುಖ್ಯ ಫಿಜಿಯೋಥೆರಪಿಸ್ಟ್ ಆಗಿ ಕೊಡಗಿನ ಡಾ. ಚೆಕ್ಕೆರ ಪೂವಯ್ಯ ಅವರು ಸತತ ಮೂರನೇ ಅವಧಿಗೆ ನೇಮಕಗೊಂಡಿದ್ದಾರೆ.
ಪ್ರಸ್ತುತ ಐರ್ಲ್ಯಾಂಡ್ ನಲ್ಲಿ ಫಿಜಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಪೊನ್ನoಪೇಟೆ ತಾಲೂಕು ಹುದಿಕೇರಿ- ಹೈಸೊಡ್ಲೂರು ಗ್ರಾಮದ ಚೆಕ್ಕೆರ ರಮೇಶ್ ಹಾಗೂ ಗೀತಾ ದಂಪತಿಯ ದ್ವಿತೀಯ ಪುತ್ರ ರಾಗಿದ್ದಾರೆ.

