ಕುಶಾಲನಗರ ಪುರಸಭೆಯಿಂದ ಶೀಘ್ರ ಸ್ಪಂದನೆ; ಕುಸಿತದ ಭೀತಿಯಲ್ಲಿರುವ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ ಪರಿಶೀಲನೆ

Jul 8, 2026 - 10:38
 0  333
ಕುಶಾಲನಗರ ಪುರಸಭೆಯಿಂದ ಶೀಘ್ರ ಸ್ಪಂದನೆ;  ಕುಸಿತದ ಭೀತಿಯಲ್ಲಿರುವ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ ಪರಿಶೀಲನೆ

ಕುಶಾಲನಗರ, ಜು.8: 'ಕುಸಿತದ ಭೀತಿಯಲ್ಲಿ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ' ವರದಿಗೆ ಶೀಘ್ರ ಸ್ಪಂದಿಸಿದ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯಾಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿ ಇಂದು ಬೆಳ್ಳಂ ಬೆಳಗ್ಗೆ ಮಳೆಯಲ್ಲಿಯೆ ಕುಸಿಯುವ ಹಂತದಲ್ಲಿರುವ ಕಾಂಕ್ರೀಟ್ ರಸ್ತೆಯ ತಳಭಾಗ ಪರಿಶೀಲಿಸಿದರು.

 ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಈ ಕೂಡಲೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ತಯಾರಿಸಿ ಎನ್ ಡಿ ಆರ್ ಐ ಹಣಕಾಸಿನ ಯೋಜನೆ ಅಡಿಯಲ್ಲಿ ಕಾಮಗಾರಿ ಶೀಘ್ರದಲ್ಲಿಯೇ ನಡೆಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 1
Sad Sad 1
Wow Wow 0