89 ವಿಶೇಷ ಚೇತನರಿಗೆ 19.75 ಲಕ್ಷ ವೆಚ್ಚದ 156 ಸಾಧನ ಸಲಕರಣೆಗಳನ್ನು ವಿತರಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ:ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಆಡಿಪ್ ಯೋಜನೆಯಡಿ ಶಾಸಕರಾದ ಡಾ.ಮಂತರ್ ಗೌಡ ಅವರು ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ 89 ವಿಶೇಷ ಚೇತನರಿಗೆ ರೂಪಾಯಿ 19.75 ಲಕ್ಷ ವೆಚ್ಚದ 156 ಸಾಧನ ಸಲಕರಣೆಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆಮ್ಮಯ್ಯ ಅಧ್ಯಕ್ಷರು ರೋಟರಿ ಕ್ಲಬ್ ಕುಶಾಲನಗರ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಶಾಸಕರು ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಕೃಷ್ಣಮೂರ್ತಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಅಜಯ್ ಸುಧಾ ,ಸದಸ್ಯರು ಸಲಹಾ ಸಮಿತಿ ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಕೊಡಗು ಶಾಖೆ, ವಿ ಪಿ ಶಶಿಧರ್ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರು ಕುಶಾಲನಗರ ತಾಲೂಕು, ಪ್ರಮೋದ್ ಮುತ್ತಪ್ಪ ಅಧ್ಯಕ್ಷರು KUDA ಕುಶಾಲನಗರ, ವಿಮಲಾ ವಿಕಲ ಚೇತನ ಅಧಿಕಾರಿ ಇನ್ನಿತರ ಗಣ್ಯರು ಹಾಜರಿದ್ದರು.