ನೋಟರಿ ಹುದ್ದೆಗೆ ನೇಮಕ:ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ ಮಾದಂಡ ಎಸ್ ಪೂವಯ್ಯ
ವಿರಾಜಪೇಟೆ;ಮಾದಂಡ ಎಸ್ ಪೂವಯ್ಯ ಅವರು ವಿರಾಜಪೇಟೆ ನಗರದ ಖ್ಯಾತ ವಕೀಲರು ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಡಿಸಿಸಿ ಉಪಾಧ್ಯಕ್ಷರು ವಿರಾಜಪೇಟೆ ತಾಲ್ಲೂಕು ಸಂಫಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ,ಪೂವಯ್ಯ ಅವರು ಇದೀಗ ನೋಟರಿ ವಕೀಲರಾಗಿ ನೇಮಕವಾದ ಹಿನ್ನೆಲೆ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾಗಿ ನೀಡಿ ಕೃತಜ್ಞತೆ ಸಲ್ಲಸಿದರು.ಈ ಸಂದರ್ಭ ಶಾಸಕರು ಮಾದಂಡ ಎಸ್ ಪೂವಯ್ಯ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾದಂಡ ಪೂವಯ್ಯ ಅವರ ಮಗನಾದ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅವರು ಇದ್ದರು.