ವಿರಾಜಪೇಟೆ ಸ್ವದೇಶಿ ರೇಂಜ್ ನೂತನ ಸಮಿತಿ ಅಸ್ತಿತ್ವಕ್ಕೆ
ವಿರಾಜಪೇಟೆ; ನುಸ್ರತುಲ್ ಉಲೂಮ್ ಮದರಸ ಆವರಣದಲ್ಲಿ ಸ್ವದೇಶಿ ರೇಂಜ್ ಚೇರ್ಮನ್ ಮಾಹಿನ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಬ್ದುಲ್ ಘನಿ ಉಸ್ತಾದ್ ಅವರು ಪ್ರಾರ್ಥನೆ ನೆರವೇರಿಸಿದರು.
ಸ್ವದೇಶಿ ರೇಂಜ್ ಕಾರ್ಯದರ್ಶಿ ಸಹದ್ ಫೈಝಿ ಚೋಕಂಡಳ್ಳಿ ಸ್ವಾಗತ ಕೋರಿದರು. ವಿರಾಜಪೇಟೆ ರೇಂಜ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಫೈಝಿ ಎಡಪಾಲ ಸ್ವದೇಶಿ ರೇಂಜ್ ಎಲ್ಲರೂ ಸದುಪಯೋಗ ಪಡಿಸಬೇಕೆಂದು ಕರೆ ನೀಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಬಳಿಕ 2026-2 7ನೇ ಸಾಲಿನ ಪದಾಧಿಕಾರಿಗಳನ್ನು ನೇಮಕ ಮಾಡಲು ಮುಹಮ್ಮದ್ ಹನೀಫ್ ಫೈಝಿ ಎಡಪಾಲ ಅವರು ನೇತೃತ್ವ ನೀಡಿದರು.ಅಧ್ಯಕ್ಷಾರಾಗಿ ಹನೀಫ ಫೈಝಿ ಗುಂಡಿಕೆರೆ ಕನ್ವೀನರ್ ಆಗಿ, ಸಹದ್ ಫೈಝಿ ಚೋಕಂಡಳ್ಳಿ, ಖಜಾಂಜಿಯಾಗಿ ರಝಾಕ್ ಫೈಝಿ ಎಡಪಾಲ ಆಯ್ಕೆಯಾದರು.

