ಪೊನ್ನಂಪೇಟೆ: ಕುರ್ಚಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿದ ಕಾರು: ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರು.!

ಕುರ್ಚಿ:ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರ್ಪು ಜಲಪಾತಕ್ಕೆ ತೆರಳುವ ಮುಖ್ಯ ರಸ್ತೆಯ ಕುರ್ಚಿ ಗ್ರಾಮದ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಮಾರುತಿ 800 ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಮಗುಚಿಬಿದ್ದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಕುರ್ಚಿ ಗ್ರಾಮದ ಕಡೆಯಿಂದ ಸ್ಥಳೀಯ ಕಾಲೋನಿಗೆ ತೆರಳುತ್ತಿದ್ದ ಕಾರಿನಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕಂಡ ಕೂಡಲೇ ಇರ್ಪು ಜಲಪಾತದ ಸುದ್ದಿ ಮಾಡಲು ತೆರಳುತ್ತಿದ ಪತ್ರಕರ್ತ ಚೆಪ್ಪುಡಿರ ರೋಷನ್ ಅವರು ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಎ. ಎಸ್ ರವೀಂದ್ರ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ ಕೆಲವೇ ನಿಮಿಷದಲ್ಲಿ ಸಿಬ್ಬಂದಿಗಳೊoದಿಗೆ ಘಟನಾ ಸ್ಥಳಕ್ಕೆ ಆಗಮಿಸಿ, ಚರಂಡಿಗೆ ಮಗುಚಿಕೊಂಡಿದ್ದ ಕಾರನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿ, ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಕುಟ್ಟ ಠಾಣಾಧಿಕಾರಿ ಎಚ್. ಕೆ ಮಹಾದೇವ, ಅಪರಾಧ ಪತ್ತೆದಳದ ಸಿಬ್ಬಂದಿ ಶರತ್, ನಾಗಪ್ಪ, ದಯಾನಂದ ಚಾಲಕರಾದ ಯೋಗೇಶ್ ಹಾಗೂ ಮಹೇಶ್ ಇದ್ದರು.
What's Your Reaction?






