ನಾಳೆ ವಿದ್ಯುತ್ ವ್ಯತ್ಯಯ
ಮಡಿಕೇರಿ;ನಾಳೆ ಶುಕ್ರವಾರದಂದು ಗೋಣಿಕೊಪ್ಪಲು ವಿದ್ಯುತ್ ಮಾರ್ಗದ ನಿರ್ವಹಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30ವರೆಗೆ ಶಾಂತಿನಗರ, ಗಣಪತಿ ನಗರ, ಜೋಡುಬಟ್ಟಿ, ಅರವತ್ತೊಕ್ಕಲು ,ಕಾಫಿ ಬೋರ್ಡ್, PHS ಕಾಲೋನಿ, ಗೋಣಿಕೊಪ್ಪಲು ಪಟ್ಟಣ, ಹರಿಶ್ಚಂದ್ರಪುರ, ಕೈಕೇರಿ, ಈರಣ್ಣ ಕಾಲೋನಿ, ಜ್ಯೂಸ್ ಫ್ಯಾಕ್ಟರಿ ರಸ್ತೆ, ಲೋಪ ಮುದ್ರಾ ಆಸ್ಪತ್ರೆ ಸುತ್ತಮುತ್ತಲು ಈ ಭಾಗಗಳಿಗೆ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಹಾಗೆಯೇ ತಮ್ಮ ತೋಟಗಳಲ್ಲಿ ಹಾಗೂ ಮನೆಯ ಮುಂಭಾಗದಲ್ಲಿ ವಿದ್ಯುತ್ ಮಾರ್ಗಕ್ಕೆ ಅಡೆಚಣೆ ಮಾಡುವಂತಹ ಮರದ ರೆಂಬೆ ಕೊಂಬೆಗಳು ಇದ್ದಲ್ಲಿ ತಮ್ಮ ವ್ಯಾಪ್ತಿಯ ಲೈನ್ ಮೆನ್ ರವರಿಗೆ ಮಾಹಿತಿಯನ್ನು ನೀಡಿ ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
