ಮದ್ದೂರು ಬಳಿ ರಸ್ತೆ ಅಪಘಾತ: ವಿರಾಜಪೇಟೆ ಮಾಜಿ ಬಿಇಒ ಪ್ರಕಾಶ್‌ಗೆ ಗಾಯ‌

ಮದ್ದೂರು ಬಳಿ ರಸ್ತೆ ಅಪಘಾತ: ವಿರಾಜಪೇಟೆ ಮಾಜಿ ಬಿಇಒ ಪ್ರಕಾಶ್‌ಗೆ ಗಾಯ‌

ಮಡಿಕೇರಿ: ವಿರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಪ್ರಕಾಶ್ ಅವರು ಮದ್ದೂರು ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ರಾಮನಗರದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸುದ್ದಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ - ವಿರಾಜಪೇಟೆ ಘಟಕ KSPSTA ವಿರಾಜಪೇಟೆ ಶಿಕ್ಷಕರ ಗಮನಕ್ಕೆ ತಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.