ವಿರಾಜಪೇಟೆ-ಅಮ್ಮತ್ತಿ ರಸ್ತೆಯಲ್ಲಿ ಭೀಕರ ಅಪಘಾತ; ಸ್ಕೂಟರ್ ಸವಾರ ಸಾವು

ವಿರಾಜಪೇಟೆ-ಅಮ್ಮತ್ತಿ ರಸ್ತೆಯಲ್ಲಿ ಭೀಕರ  ಅಪಘಾತ; ಸ್ಕೂಟರ್ ಸವಾರ ಸಾವು

ವಿರಾಜಪೇಟೆ: ಭಾನುವಾರ ರಾತ್ರಿ ಎಂಟು ಗಂಟೆಗೆ ಬಿಳುಗುಂದ ಗ್ರಾಮದ ವಾಸು ಅವರ ಪುತ್ರ ಪ್ರಗತ್ ಹಾಗೂ ತಂಗಪ್ಪ ಎಂಬವರು ತಮ್ಮ ಸ್ಕೂಟಿಯಲ್ಲಿ ಅಮ್ಮತ್ತಿಗೆ ತೆರಳುತ್ತಿದ್ದ ವೇಳೆ ಸಿದ್ದಾಪುರದಿಂದ- ವಿರಾಜಪೇಟೆ ಕಡೆಗೆ ಬರುತ್ತಿದ್ದ ಮಾರುತಿ ವ್ಯಾನ್ ಡಿಕ್ಕಿ ಹೊಡೆದು ವ್ಯಾನ್ ಮಗುಚಿಕೊಂಡಿದೆ .ಸ್ಕೂಟಿ ಸವಾರ ಪ್ರಗತ್ ಗಂಭೀರ ಗಾಯ ಉಂಟಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಪ್ರಗತ್ ಕೊನೆಯುಸಿರೆಳೆದಿದ್ದಾರೆ ತಿಳಿದು ಬಂದಿದೆ.