ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ: ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ ಕೆ.ಎ.ಉಮ್ಮರ್

Aug 24, 2026 - 14:39
 0  85
ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ: ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ  ಕೆ.ಎ.ಉಮ್ಮರ್

ಮಡಿಕೇರಿ ಆ. 24 - ಪಾರಾಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಕಾಯ೯ಕ್ರಮ ಆಯೋಜಿಸಲಾಗಿತ್ತು. 

 ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎ.. ಉಮ್ಮರ್ ನಿವೖತ್ತ ನಾಯಕ್ ಸುಬೇದಾರ್ ನಾಯಕಂಡ ಬೋಪಣ್ಣ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ಮಾತೃಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಓದಿ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಸಾದ್ಯ.ಮನಸಿದ್ದರೆ ಮಾರ್ಗ.ಎಂಬಂತೆ ಪ್ರತಿಯೊಬ್ಬರು ಏಕಾಗ್ರತೆಯಿಂದ ಓದಿ ಉತ್ತಮ ನಾಗರೀಕರಾಗಿ ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡುವಂತೆ ಉಮ್ಮರ್ ಕರೆ ನೀಡಿದರು ಹಿರಿಯರು ನಮ್ಮ ಕುಟುಂಬದ ನಾವಿಕರು .

ಅವರ ಮಾತುಗಳಿಗೆ ನಾವು ಕಿವಿಯಾಗಬೇಕು.ಅವರನ್ನು ಗೌರವಿಸುವುದು, ಪ್ರೀತಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾಥಿ೯ಗಳು ಹಿರಿಯರಿಗೆ ನುಡಿ ನಮನ ಸಲ್ಲಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಮಾತನಾಡಿದ ಡಾ.ಶುಭಾ ಕೆ.ಜಿ., ಶಿಕ್ಷಣ, ಆರೋಗ್ಯ , ಪ್ರಕೃತಿ ವಿಕೋಪದಂಥ ,ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಸಕ್ರಿಯವಾಗಿ ಕಳೆದ 22 ವರ್ಷಗಳಿಂದ ಪಾಲ್ಗೊಳ್ಳುತ್ತಿದೆ.ಇಂದಿನ ಮಕ್ಕಳು ನಮ್ಮ ಹಿರಿಯರಿಗೆ ಗೌರವ,ಪ್ರೀತಿ, ಸಮಯ ನೀಡಿ ಅವರ ಅನುಭವಗಳನ್ನು ನಮ್ಮ ಜೀವನ ಪಾಠ ವನ್ನಾಗಿ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಕರೆ ನೀಡಿದರು. . ಮುಖ್ಯ ಶಿಕ್ಷಕ ಕಿಶೋರ್, ಪಾರಾಣೆಯ ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯದ ಡಾ.ಚಂದನ್ ಹಾಜರಿದ್ದರು..ದೃಶ್ಯ,ನವ್ಯ,ದಿಶಾ ಪ್ರಾಥಿ೯ಸಿ, ಕಿಶೋರ್ ಸ್ವಾಗತಿಸಿ, ಕೆ.ವಿ. ಸಂಗೀತ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0