ಸೋಮವಾರಪೇಟೆ:ಹನುಮ ಜಯಂತಿ ಅಂಗವಾಗಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ
ಸೋಮವಾರಪೇಟೆ:- ಹನುಮ ಜಯಂತಿ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದ ಪ್ರದಾನ ಅರ್ಚಕರಾದ ಶ್ರೀ ನಂಜುಂಡೇಶ್ವರ ರವರ ಪುರೋಹಿತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ,ಅರ್ಚನೆ ನಡೆಯಿತು ನಂತರ ಅರ್ಚಕ ಶ್ರೀ ಉಡುಪ ಮತ್ತು ತಂಡದವರಿಂದ ಮಾರುತಿ ಹೋಮ ,ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಸಮಿತಿ ಅಧ್ಯಕ್ಷ ಸಿ. ಪಿ. ಗೋಪಾಲ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್.ಸೀತಾರಾಂ, ಸಮಿತಿ ಕಾರ್ಯದರ್ಶಿ ನಂದಕುಮಾರ್,ಸದಸ್ಯರುಗಳಾದ ರಾಘವ,ಸುರೇಶ್,ಹಾಲಪ್ಪ, ಗಣೇಶ್,ಹಾಗೂ ಮುಂತಾದವರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1
